Sunday 3 May 2015

ರಾಜ್ಯ ಮಟ್ಟದ ಕವಿ ಬಿ.ಎಂ.ಶ್ರೀ. ಕಾವ್ಯ ಪುರಸ್ಕಾರಕ್ಕೆ ಆಯ್ಕೆ

 ರಾಜ್ಯ ಮಟ್ಟದ ಕವಿ ಬಿ.ಎಂ.ಶ್ರೀ. ಕಾವ್ಯ ಪುರಸ್ಕಾರಕ್ಕೆ ಆಯ್ಕೆ
ಮಂಡ್ಯ : ಜಿಲ್ಲಾ ಯುವ ಬರಹಗಾರರ ಬಳಗದ ವತಿಯಿಂದ ನೀಡಲಾಗುವ ರಾಜ್ಯ ಮಟ್ಟದ ಕನ್ನಡದ ಕಣ್ವ ಖ್ಯಾತಿಯ ಕವಿ ಬಿ.ಎಂ.ಶ್ರೀಕಂಠಯ್ಯ ಕಾವ್ಯ ಪ್ರಶಸ್ತಿಗೆ ವಿವಿಧ ಜಿಲ್ಲೆಯ 6 ಮಂದಿ ಪ್ರತಿಭಾವಂತ ಕವಿ-ಕವಯತ್ರಿಯರು ಆಯ್ಕೆಯಾಗಿದ್ದಾರೆ ಎಂದು ಬಳಗದ ಅಧ್ಯಕ್ಷ ಟಿ.ಸತೀಶ್ ಜವರೇಗೌಡ ತಿಳಿಸಿದ್ದಾರೆ.
     ಪ್ರತಿಭಾವಂತ ಸೃಜನಶೀಲ ಯುವ ಕವಯತ್ರಿಯರಾದ ಶಿವಮೊಗ್ಗದ ಶ್ರೀಮತಿ ದೀಪ್ತಿ ಭದ್ರಾವತಿ, ಹಾಸನದ ಕುಮಾರಿ ಮಮತಾ ಅರಸೀಕೆರೆ ಹಾಗೂ ಯುವಕವಿಗಳಾದ ಕೊಪ್ಪಳದ ಅಲ್ಲಾಗಿರಿರಾಜ್ ಕನಕಗಿರಿ, ಮಂಡ್ಯದ ಡಾ. ಅಮೃತಿ ಜೆ.ರಾಜೇಶ್, ಬೆಂಗಳೂರಿನ ಹಂದಲಗೆರೆ ಗಿರೀಶ್, ದಾವಣಗೆರೆಯ ವಿ.ಬಸವರಾಜಪ್ಪ ಬೇವಿನಮರ ಆಯ್ಕೆಯಾಗಿದ್ದಾರೆ.
   ಮೇ 9 ರಂದು ಮಂಡ್ಯದ ಗಾಂಧಿ ಭವನದಲ್ಲಿ ನಡೆಯಲಿರುವ ರಾಜ್ಯಮಟ್ಟದ ಕವಿಮೇಳದ ಸಮಾರೋಪ ಸಮಾರಂಭದಲ್ಲಿ ಪ್ರಸಿದ್ಧ ಸಾಹಿತಿ ಡಾ.ಸಿ.ಪಿ.ಕೆ. ಅವರು  ಬಿ.ಎಂ.ಶ್ರೀ. ಕಾವ್ಯ ಪುರಸ್ಕಾರವನ್ನು ಪ್ರದಾನ ಮಾಡುವರು. ಮೈಸೂರು ವಿ.ವಿ.ಯ ಡಾ. ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣ ಕೇಂದ್ರದ ವಿಶ್ರಾಂತ ನಿರ್ದೇಶಕ ಎಂ.ಬಿ.ಜಯಶಂಕರ್ ಅಧ್ಯಕ್ಷತೆ ವಹಿಸುವರು.  

No comments:

Post a Comment