Sunday 17 May 2015

ನಾನು ಜಾತಿ ಗಣತಿಯ ವಿರೊದಿಯಲ್ಲ.ಕೆಎಸ್.ಈಶ್ವರಪ್ಪ.

ಬೆಂಗಳೂರು: ನಾನು ಜಾತಿಗಣತಿ ವಿರೋಧಿ ಅಲ್ಲ. ಆದರೆ, ಪ್ರಾಮಾಣಿಕವಾಗಿ ಜಾತಿಗಣತಿ ಆಗಬೇಕು. ಈಗ ನಡೆಯುತ್ತಿರುವ ಗಣತಿ ಸರಿ ಇಲ್ಲ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಸರ್ಕಾರದ ವಿರುದ್ಧ ಕಿಡಿ ಕಾರಿದರು.

ಹಾಲುಮತ ಮಹಾಸಭಾ ಸಮುದಾಯ ಸಮೃದ್ಧಿಗೊಂದು ಸಮೂಹ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಈಗ ಆಗುತ್ತಿರುವ ಸರ್ವೆ ಸರಿಯಿಲ್ಲ. ಕ್ರಿಶ್ಚಿಯನ್ ಕುರುಬ, ವಿಶ್ವಕರ್ಮ ಸೇರಿದಂತೆ ಉಪಜಾತಿ ಕಾಲಂನಲ್ಲಿ ಇಲ್ಲಸಲ್ಲದ ಜಾತಿಗಳಿವೆ. ಆ ಜಾತಿಗಳು ಎಲ್ಲಿವೆ? ಆ ಜನ ಎಲ್ಲಿದ್ದಾರೆ? ಎಂಬುದು ಯಾರಿಗೂ ಗೊತ್ತಿಲ್ಲ. ಹಾಗಾಗಿ ರಾಜ್ಯದಲ್ಲಿ ಪ್ರಾಮಾಣಿಕ ಸರ್ವೆ ಆಗಬೇಕು. ಅದಕ್ಕಾಗಿ ನಾವು ಹೋರಾಟ ನಡೆಸಿಯೇ ತೀರುತ್ತೇವೆ' ಎಂದರು.

ಜಾತಿ ಪತ್ತೆ ಮಾಡಲು ಸರ್ಕಾರ ಅನು ಸರಿರುವ `ಆಲ್ಫಬೆಟ್' ತಂತ್ರ ಸರಿಯಲ್ಲ. ಕುರುಬರಿಗೆ ಕೆ, ಹಾಲು ಮತದವರಿಗೆ ಎಚ್, ತಿಗಳರಿಗೆ ಟಿ.. ಹೀಗೆ ಅಕ್ಷರಗಳಿಂದ ಅವರನ್ನು ಗುರುತಿಸಿರುವುದು ಸಹ ಸರಿಯಲ್ಲ. ಈ ಅಂಶಗಳು ಸೇರಿದಂತೆ ಲೋಪದೋಷ ಗಳ ತಿದ್ದುಪಡಿ ಆಗಬೇಕು. ಲೋಪದೋಷ ತೋರಿಸಿ ದ್ದಕ್ಕೆ ಈಶ್ವರಪ್ಪ ಜಾತಿ ಗಣತಿಗೆ ವಿರೋಧಿ ಎಂಬ ಪಟ್ಟ ಕಟ್ಟಿದರು. ನನ್ನ ವಿರೋಧ ಗಣತಿಗಲ್ಲ, ಆ ಕೆಲಸ ಸರಿಯಾಗಿ ಆಗಲಿ ಎಂಬುದು ನಮ್ಮ ಅಭಿಪ್ರಾಯ ಎಂದರು.

ಆಶೀರ್ವಚನ ನೀಡಿದ ಹೊಸದುರ್ಗ ಶ್ರೀ ಕನಕ ಗುರುಪೀಠದ ಶ್ರೀ ಈಶ್ವರಾ ನಂದಪುರಿ ಸ್ವಾಮೀಜಿ, `ಸಮುದಾಯದ ಬಡವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಶಾಶ್ವತ ನಿಧಿ ಸಂಗ್ರಹ ಯೋಜನೆಯಡಿ `ಕನಕ ನಿಧಿ' ಸ್ಥಾಪಿಸಲಾಗುವುದು. ಕಾಗಿನೆಲೆಯಲ್ಲಿ 35 ಅಡಿ ಎತ್ತರದ ಏಕಶಿಲಾ ಕನಕಮೂರ್ತಿಯನ್ನು ಸ್ಥಾಪಿಸುತ್ತಿದ್ದು, ಕೆಲವೇ ದಿನಗಳಲ್ಲಿ ಕೆತ್ತನೆ ಕೆಲಸ ಆರಂಭವಾಗಲಿದೆ.

ಅದಕ್ಕೆ ದಾನಿಗಳು ಕಲ್ಲನ್ನು ದಾನ ಮಾಡಬಹುದು. ಒಂದು ಕಲ್ಲಿಗೆ ರು.15 ಸಾವಿರ ವೆಚ್ಚ ತಗುಲಲಿದ್ದು, ಶ್ರೀಮಂತರು ನೆರವು ನೀಡುವಂತೆ ಹೇಳಿದರು. ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಎಚ್.ಎಂ. ರೇವಣ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಹಾಸಭಾ ಅಧ್ಯಕ್ಷ ರುದ್ರಣ್ಣ ಗುಳಗುಳಿ, ಎಂ.ನಿಕೇತರಾಜ್ ಮತ್ತಿತರರು ಇದ್ದರು.

ಎಚ್.ಎಂ. ರೇವಣ್ಣಗೆ ಸಚಿವ ಸ್ಥಾನ ನೀಡಿ
ವಿಧಾನಪರಿಷತ್  ಸದಸ್ಯ ಎಚ್.ಎಂ.ರೇವಣ್ಣ ಅವರು ಹಲವು ವರ್ಷಗಳಿಂದ ಪಕ್ಷಕ್ಕೆ ನಿಷ್ಠಾವಂತರಾಗಿದ್ದಾರೆ. ಹಾಗಾಗಿ ಗ್ರಾ.ಪಂ ಚುನಾವಣೆ ನಂತರ ಸಂಪುಟ ವಿಸ್ತರಣೆ ವೇಳೆ ರೇವಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕೆ ಎಂದು ಮುಖ್ಯಮಂತ್ರಿಗಳನ್ನು ಆಗ್ರಿಹಿಸಿದ ಈಶ್ವರಪ್ಪ, ಈ ಸಂಬಂಧ ಮಾತುಕತೆ ನಡೆಸಲಾಗುವುದು, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಹಾಲುಮತದ ಸೊಸೈಟಿಗಳನ್ನು ಸ್ಥಾಪಿಸಬೇಕು. ಸಮುದಾಯದ ಬಡವರಿಗೆ ಅಗತ್ಯಕ್ಕನುಗುಣವಾಗಿ ಸಾಲ ನೀಡುವ ಮೂಲಕ ಅವರಿಗೆ ನೆರವಾಗಬೇಕು ಎಂದು ಹೇಳಿದರು

No comments:

Post a Comment