Monday 14 December 2015

ಡಿ.21ರಂದು ರೈತಸಂಘದಿಂದ ಬøಹತ್ ಪ್ರತಿಭಟನೆ
ಮಂಡ್ಯ, ಡಿ.14- ಮೈಷುಗರ್ ಕಾರ್ಖಾನೆ ಆರಂಭ, ಭತ್ತಕ್ಕೆ ಬೆಂಬಲ ಬೆಲೆ, ಹಾನಿಗೊಳಗಾದ ಭತ್ತದ ಬೆಳೆ ಪರಿಹಾರ ನೀಡುವಂತೆ ಆಗ್ರಹಿಸಿ ಡಿ.21ರಂದು ರೈತಸಂಘ ಕಾರ್ಯಕರ್ತರಿಂದ ಬøಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತಸಂಘದ ಅಧ್ಯಕ್ಷ ಬೋರಾಪುರ ಶಂಕರೇಗೌಡ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾವಮಾನ ವೈಪರಿತ್ಯದಿಂದ ಇತ್ತೀಚಿಗೆ ಸುರಿದ ಭಾರಿ ಮಳೆಯಿಂದ ಭತ್ತಕ್ಕೆ ಜೋನುರೋಗ ತಗುಲಿ ಅಪಾರ ನಷ್ಟವಾಗಿದೆ ಆದ್ದರಿಂದ ಕ್ವಿಂಟರ್ ಭತ್ತಕ್ಕೆ 2 ಸಾವಿರ ರೂ. ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.
ನವೆಂಬರ್- ಡಿಸೆಂಬರ್‍ನಲ್ಲಿ ಮೈಷುಗರ್ ಕಾರ್ಖಾನೆಯನ್ನು ಆರಂಭಿಸಲಾಗುವುದು ಎಂದು ಹೇಳುತ್ತಿದ್ದ ಸಕ್ಕರೆ ಸಚಿವರು ಈಗ ಜನವರಿಯಲ್ಲಿ ಕಾರ್ಖಾನೆ ಆರಂಭಿಸುತ್ತೇನೆ ಎಂದು ಹೇಳುತ್ತಿದ್ದಾರೆ ಅದು ಎಷ್ಟರ ಮಟ್ಟಿಗೆ ನಿಜವೋ ತಿಳಿಯುತ್ತಿಲ್ಲ ಕೂಡಲೇ ಕಾರ್ಖಾನೆ ಆರಂಭಕ್ಕೆ ಕ್ರಮ ಕೈಗೊಳ್ಳಬೇಕು. ಕೇಂದ್ರ ಸರ್ಕಾರ ನಿಗದಿ ಪಡಿಸಿರುವ ಕಬ್ಬಿಗೆ ಎಫ್‍ಆರ್‍ಪಿ ದರವನ್ನು ನೀಡಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ಕೆಲವು ಗ್ರಾಮಗಳು ಇನಾಮ್ ಗ್ರಾಮಗಳಾಗಿದ್ದು, ರೈತರಿಗೆ ರೆವಿನ್ಯೂ ದಾಖಲೆಗಳನ್ನು ಪಡೆಯುವಲ್ಲಿ ತೊಂದರೆಯಾಗಿದ್ದು ಈ ಇನಾಮ್ ಗ್ರಾಮಗಳಲ್ಲಿ ಸರ್ಕಾರ ಕೂಡಲೇ ರೀ ಸರ್ವೆ ನಡೆಸಿ ಪೆÇೀಡಿಮುಕ್ತ ಗ್ರಾಮಗಳಾಗಿ ಘೋಷಿಸಬೇಕು ಎಂದು ಒತ್ತಾಯಿಸಿದರು.
ಪ್ರಧಾನ ಕಾರ್ಯದರ್ಶಿ ಮಂಜೇಶಗೌಡ, ಮಹೇಶ, ಸುಧೀರ್‍ಕುಮಾರ್, ಶಿವರುದ್ರ ಉಪಸ್ಥಿತರಿದ್ದರು.

No comments:

Post a Comment