Monday 3 October 2016

ಅಕ್ಟೋಬರ್ 4 ರಂದು ಚಲನಚಿತ್ರೋತ್ಸವದಲ್ಲಿ ಪ್ರದರ್ಶಿತವಾಗುವ ಚಲನಚಿತ್ರಗಳು

ಅಕ್ಟೋಬರ್ 4 ರಂದು ಚಲನಚಿತ್ರೋತ್ಸವದಲ್ಲಿ ಪ್ರದರ್ಶಿತವಾಗುವ ಚಲನಚಿತ್ರಗಳು
ಮೈಸೂರು.ಅ.3. ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2016ರ ಅಂಗವಾಗಿ ಮೈಸೂರು ನಗರದ ಎರಡು ವೇದಿಕೆಗಳಲ್ಲಿ ಅಕ್ಟೋಬರ್ 4 ರಂದು ನಡೆಯುವ ದಸರಾ ಚಲನಚಿತ್ರೋತ್ಸವ ಕಾರ್ಯಕ್ರಮದ ಅಂಗವಾಗಿ ಪ್ರದರ್ಶಿತವಾಗುವ ಚಲನಚಿತ್ರಗಳ ವಿವರ ಇಂತಿದೆ.
ದಸರಾ ಚಲನಚಿತ್ರೋತ್ಸವ ಅಂಗವಾಗಿ ಮಾನಸ ಗಂಗೋತ್ರಿಯ ಸೆನೆಟ್ ಭವನ: ಬೆಳಿಗ್ಗೆ 10-30 ಗಂಟೆಗೆ ಸೋಲೋ ಫಿನಾಲೆ,  ಬೆಳಿಗ್ಗೆ 11 ಗಂಟೆಗೆ  ಫಾರ್ ಫ್ರಂ ಹೋಂ, ಮಧ್ಯಾಹ್ನ 2 ಗಂಟೆಗೆ ಮಾನ್ ಅನ್‍ಕಲ್,  ಹಾಗೂ ಮಧ್ಯಾಹ್ನ 4 ಗಂಟೆಗೆ ಜಲ್
        ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣ: ಬೆಳಿಗ್ಗೆ 10-30 ಗಂಟೆಗೆÀÉ ಟಾಕಿಂಗ್ ವಾಲ್ಸ್,  ಬೆಳಿಗ್ಗೆ 11 ಗಂಟೆಗೆ ವಿದಾಯ,  ಮಧ್ಯಾಹ್ನ 2 ಗಂಟೆಗೆ ದಿ ಹೆಡ್ ಹಂಟರ್, ಸಂಜೆ 4 ಗಂಟೆಗೆ ದ ಪೋಲ್ ಡೈರಿ ಚಲನಚಿತ್ರಗಳು ಪ್ರದರ್ಶನಗಳು ಉಚಿತ ಪ್ರವೇಶ.
    ಸ್ಕೈಲೈನ್- ದೇವರನಾಡಲ್ಲಿ,   ಒಲಂಪಿಯಾ- ಕಿರಗೂರಿನ ಗಯ್ಯಾಳಿಗಳು, ಡಿ.ಆರ್.ಸಿ.- ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಐನಾಕ್ಸ್- ಯು ಟರ್ನ್,  ಲಕ್ಷ್ಮೀ- ಫಸ್ಟ್ ರ್ಯಾಂಕ್ ರಾಜು, ಹೆಚ್.ಡಿ.ಕೋಟೆಯ ಮಂಜುನಾಥ ಚಿತ್ರಮಂದಿರದಲ್ಲಿ – ಒಡಿ & ಒಡಿs ರಾಮಾಚಾರಿ, ಕೆ.ಆರ್.ನಗರದ ಗೌರಿಶಂಕರ-ಕೆಂಡಸಪಿಂಗೆ ನಂಜನಗೂಡಿನ ಲಲಿತ- ಮಾಣಿಕ್ಯ,  ಪಿರಿಯಾಪಟ್ಟಣದ ಮಹದೇಶ್ವರ- ಬುಲ್ ಬುಲ್, ಹುಣಸೂರಿನ ಲೀಲಾ-ಲಾಸ್ಟ್ ಬಸ್ ಹಾಗೂ ಟಿ.ನರಸೀಪುರದ ಭಗವಾನ್- ಫಸ್ಟ್ ರ್ಯಾಂಕ್ ರಾಜು ಚಲನಚಿತ್ರಗಳು ಬೆಳಗಿನ ಪ್ರದರ್ಶನದಲ್ಲಿ ಪ್ರದರ್ಶಿಸಲಾಗುವುದು. ಚಿತ್ರಮಂದಿರಗಳಲ್ಲಿ ರಿಯಾಯಿತಿ ಪ್ರವೇಶ ದರ ನೆಲ ಅಂತಸ್ತಿಗೆ 10 ರೂ. ಹಾಗೂ ಬಾಲ್ಕನಿಗೆ  20 ರೂ.  ಹಾಗೂ ಮಲ್ಟಿಫ್ಲೆಕ್ಸ್ ರೂ. 30 ನಿಗದಿಪಡಿಸಿದೆ.
ಅಕ್ಟೋಬರ್ 4 ರಂದು ದಸರಾ ಮಹೋತ್ಸವದ ಸಾಂಸ್ಕøತಿಕ ಕಾರ್ಯಕ್ರಮಗಳು
    ಮೈಸೂರು.ಅ.03. ದಸರಾ ಮಹೋತ್ಸವ 2016 ರ ಅಂಗವಾಗಿ ವಿವಿಧ ವೇದಿಕೆಗಳಲ್ಲಿ ಅಕ್ಟೋಬರ್ 4 ರಂದು ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದ್ದು, ಅವುಗಳ ವಿವರ ಇಂತಿದೆ.
      ಅರಮನೆ ವೇದಿಕೆ:  ಸಂಜೆ 6 ಗಂಟೆಗೆ ಬೆಂಗಳೂರಿನ ಬಿ. ಜಯಶ್ರೀ ತಂಡದಿಂದ ರಂಗೀತೆ,  ಸಂಜೆ     7-15ಕ್ಕೆ ಕೇರಳ ದಕ್ಷಿಣ ವಲಯ ಸಾಂಸ್ಕøತಿಕ ಕೇಂದ್ರದ ವತಿಯಿಂದ ಮೋಹಿನಿಅಟ್ಟಂ ನ್ಯತ್ಯ, ಸಂಜೆ 7-45ಕ್ಕೆ ಬೆಂಗಳೂರಿನ ಎಸ್.ಶಂಕರ್ ಮತ್ತು ತಂಡದಿಂದ ಶ್ರೀವಿನಾಯಕ ತೊರವಿ, ಹಿಂದೂಸ್ತಾನಿ ಹಾಗೂ ಕರ್ನಾಟಕ ಸಂಗೀತ ಜುಗಲ್‍ಬಂದಿ.
ಜಗನ್ಮೋಹನ ಅರಮನೆ ವೇದಿಕೆ: ಸಂಜೆ 5-30 ರಿಂದ 6 ಗಂಟೆಯವರೆಗೆ ಹರಿಹರ ಶ್ರೀ ಚೌಡೇಶ್ವರಿ ಮಹಿಳಾ ಸಂಘದ ಯಂಕಮ್ಮ ಜೆ.ಟಿ. ಅವರಿಂದ ಮಹಿಳಾ ವಾದ್ಯಗೋಷ್ಠಿ  ಸಂಜೆ 6 ರಿಂದ 7 ಗಂಟೆಯವರೆಗೆ ತುಮಕೂರಿನ ತಾರಾ ರಾಜಗೋಪಾಲನ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಸಂಜೆ 7 ರಿಂದ 8 ಗಂಟೆಯವರೆಗೆ ಮೈಸೂರಿನ ಜಿ. ಗುರುರಾಜ್ ಮತ್ತು ತಂಡದಿಂದ ಜನಪದ ಸಂಗೀತ ಹಾಗೂ ಸಂಜೆ 8 ರಿಂದ 9 ಗಂಟೆಯವರೆಗೆ ತುಮಕೂರಿನ ರಮ್ಯ ಆನಂದ ಮತ್ತು ತಂಡದಿಂದ ಸಮೂಹ ನೃತ್ಯ.
      ಕಲಾಮಂದಿರ ವೇದಿಕೆ: ಸಂಜೆ  5-30 ರಿಂದ 6 ಗಂಟೆಯವರೆಗೆ ಗದಗ ಶಂಕ್ರಣ್ಣ ರಾಮಪ್ಪ ಸಂಕರಣ್ಣವರ ಮತ್ತು ತಂಡದಿಂದ ಜೋಗತಿ ನೃತ್ಯ,  ಸಂಜೆ 6 ರಿಂದ 7 ಗಂಟೆಯವರೆಗೆ ಮೈಸೂರಿನ ಪದ್ಮಶ್ರೀ ಮತ್ತು ತಂಡದಿಂದ ಭರತನಾಟ್ಯ, ಸಂಜೆ 7 ರಿಂದ 8 ಗಂಟೆಯವರೆಗೆ ಮೈಸೂರಿನ ಗಂಗಾಧರ ಆಚಾರ್ ಮತ್ತು ತಂಡದಿಂದ ಹರಿಕಥೆ ಹಾಗೂ ಸಂಜೆ 8 ರಿಂದ 9 ಗಂಟೆಯವರೆಗೆ ಧಾರವಾಡ ಸುಜಾತ ಗೊರವ ಮತ್ತು ತಂಡದಿಂದ ಹಿಂದೂಸ್ತಾನಿ ಸಂಗೀತ.
ಗಾನಭಾರತಿ ವೇದಿಕೆ: ಸಂಜೆ 5-30 ರಿಂದ 6 ಗಂಟೆಯವರೆಗೆ ಚಾಮರಾಜನಗರ ಪುಟ್ಟಮಲ್ಲೇಗೌಡರು ಮತ್ತು ತಂಡದಿಂದ ಗೊರವರ ಕುಣಿತ,  ಸಂಜೆ 6 ರಿಂದ 7 ಗಂಟೆಯವರೆಗೆ ತೆಲಂಗಾಣ ದಕ್ಷಿಣ ವಲಯ ಸಾಂಸ್ಕøತಿಕ ಕೇಂದ್ರದ ವತಿಯಿಂದ ಮಾಥುರಿ ನೃತ್ಯ, ಸಂಜೆ 7 ರಿಂದ 8 ಗಂಟೆಯವರೆ ಮೈಸೂರಿನ ಸುಂದರರಾಜ್ ಮತ್ತು ತಂಡದಿಂದ ಸುಗಮ ಸಂಗೀತ ಹಾಗೂ ಸಂಜೆ 8 ರಿಂದ 9 ಗಂಟೆಯವರೆ ಬೆಂಗಳೂರಿನ ದಿವ್ಯಾ ರಾಮಚಂದ್ರ ಮತ್ತು ತಂಡದಿಂದ ಸುಗಮ ಸಂಗೀತ.
     ಚಿಕ್ಕ ಗಡಿಯಾರ ವೇದಿಕೆ: ಸಂಜೆ 5-30 ರಿಂದ 6 ಗಂಟೆಯವರೆಗೆ ಮೈಸೂರಿನ ಹೆಚ್.ಡಿ.ಕೋಟೆ ತಾಲ್ಲೂಕಿನ ಗೌತಮ್ ಕಲಾ ಬಳಗದ ವತಿಯಿಂದ ಕೋಲಾಟ, ಸಂಜೆ 6 ರಿಂದ 7 ಗಂಟೆಯವರೆಗೆ  ಟಿ.ನರಸೀಪುರ ಕರಿಯಪ್ಪ ಮತ್ತು ತಂಡದಿಂದ ಪೂಜಾ ಕುಣಿತ ಹಾಗೂ ಸಂಜೆ 7 ರಿಂದ 8 ಗಂಟೆಯವರೆಗೆ ಬಾಗಲಕೋಟೆ ಜಿಲ್ಲೆ ಶಿವಶರಣ ಭಜನಾ ಮಂಡಳಿ ವತಿಯಿಂದ ಭಜನೆ.
ಪುರಭವನ ವೇದಿಕೆ: ಬೆಳಿಗ್ಗೆ 10 ಗಂಟೆ ಮೈಸೂರಿನ ರಾಜೇಗೌಡ ಕಲಾ ಸಂಘದ ವತಿಯಿಂದ ಬಳ್ಳಿ ಬಾಡಿತು ಹೂವು ಅರಳಿತು ನಾಟಕ, ಮಧ್ಯಾಹ್ನ 3 ಗಂಟೆಗೆ ತುಮಕೂರಿನ ತುರುವೇಕೆರೆ ದಾಸಪ್ಪಚಾರ್ ಮತ್ತು ತಂಡದಿಂದ ಯಕ್ಷಗಾನ ತಾಳ ಮದ್ದಲೆ ಹಾಗೂ  ಸಂಜೆ 7 ಗಂಟೆಗೆ ಮೈಸೂರಿನ ಮಧ್ಯಮ ವ್ಯಾಯೋಗಪರಸ್ಪರ  ತಂಡದಿಂದ ನಾಟಕ ನಡೆಯಲಿದೆ.
ಮಹಿಳಾ ದಸರಾ:- ಅಕ್ಟೋಬರ್ 4 ರಂದು ಬೆಳಿಗ್ಗೆ 10 ರಿಂದ 2 ಗಂಟೆಯವರೆಗೆ ಜೆ.ಕೆ.ಗ್ರೌಂಡ್‍ನಲ್ಲಿ ಮಹಿಳೆಯರು ಮತ್ತು ಕಾಲೇಜು ವಿದ್ಯಾರ್ಥಿಗಳಿಂದ ಜಾನಪದ ನೃತ್ಯ ಸ್ಪರ್ಧೆ, ಮಧ್ಯಾಹ್ನ 3 ರಿಂದ 6 ಗಂಟೆಯವರೆಗೆ ಮಹಿಳೆಯರು ಹಾಗೂ ಕಾಲೇಜು ವಿದ್ಯಾರ್ಥಿನಿಯರಿಂದ ವಿವಿಧ ರಾಜ್ಯಗಳ ವೇಷಭೂಷಣ ಸ್ಪರ್ಧೆ ಕಾರ್ಯಕ್ರಮಗಳು ನಡೆಯಲಿವೆ.
ಆಹಾರ ಮೇಳ:- ಅಕ್ಟೋಬರ್ 4 ರಂದು ಬೆಳಿಗ್ಗೆ 11 ಗಂಟೆಗೆ  ಸಿರಿಧಾನ್ಯ ಲೋಕದಲ್ಲಿ  ಬಿಜಾಪುರ ಕೃಷಿಕರ ಬಳಗದ ಜೋಳ ಸಿರಿಧಾನ್ಯ ಬಗ್ಗೆ ಪ್ರಾತ್ಯಕ್ಷತೆ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಯುವದರ್ಶಿನಿ ಯುವಕರ ವಿಭಾಗದಲ್ಲಿ ಉಪ್ಪಿಟ್ಟು ಮತ್ತು ಕೇಸರಿಬಾತ್ ತಯಾರಿಸುವ ಸ್ಪರ್ಧೆ, ಸಂಜೆ 4 ಗಂಟೆಗೆ ಮಕ್ಕಳ ಆಹಾರದಲ್ಲಿ ಮಹಿಳೆಯರ ಪಾತ್ರ ಬಗ್ಗೆ  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ರಾಧಾ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ.
ಮಕ್ಕಳ ದಸರಾ :- ಅಕ್ಟೋಬರ್ 4 ರಂದು ನಾಡಹಬ್ಬ ಮೈಸೂರು ದಸರಾ-2016 ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ವತಿಯಿಂದ ಜಗನ್ಮೋಹನ ಅರಮನೆಯಲ್ಲಿ ಬೆಳಿಗ್ಗೆ 9-30 ರಿಂದ ಭಾರತಾಂಬೆಗೆ ಪುಷ್ಪಾರ್ಚನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ಹಾಗೂ ಮೈಸೂರು ವಾಣಿ ಸಂಗೀತ ಶಾಲಾ ಮಕ್ಕಳಿಂದ ಸುಗಮ ಸಂಗೀತ ಕಾರ್ಯಕ್ರಮ. ಬೆಳಿಗ್ಗೆ 10-30 ಗಂಟೆಗೆ ಬಾಲ ಕಲಾವಿದರಾದ ಕು|| ಅಮೋಘ, ಮಹೇಂದ್ರ ಪ್ರಸಾದ್(ಡ್ರಾಮ ಜೂನಿಯರ್ ಕಲಾವಿದರು) ಹಾಗೂ ಕು|| ದಿಶಾ (ಕಿನ್ನರಿ ಧಾರವಾಹಿ) ಮಕ್ಕಳ ದಸರಾ ಉದ್ಘಾಟನೆ.  ಮಧ್ಯಾಹ್ನ 11-30 ಗಂಟೆಗೆ ಪ್ರಾಥಮಿಕ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ವಿವಿಧ ವೇಷ ಭೂಷಣ ಸ್ಪರ್ಧೆ, ಮಧ್ಯಾಹ್ನ 12-30 ಗಂಟೆಗೆ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಏಕಪಾತ್ರಾಭಿನಯ, ಮಧ್ಯಾಹ್ನ 1-30 ಗಂಟೆಗೆ ಸುಮ ರಾಜ್‍ಕುಮಾರ್ ಅವರಿಂದ ಮಾತನಾಡುವ ಗೊಂಬೆ, ಮಧ್ಯಾಹ್ನ 2-30 ಗಂಟೆಗೆ ಪ್ರೌಢಶಾಲಾ ಮಕ್ಕಳಿಗೆ ಏಕಪಾತ್ರಾಧಿನಯ ಹಾಗೂ ಮಧ್ಯಾಹ್ನ 3-30 ಗಂಟೆಗೆ ಮೈಸೂರಿನ ಕುಕ್ಕರಹಳ್ಳಿ ಸರ್ಕಾರಿ ಪ್ರೌಢಶಾಲೆ ಮಕ್ಕಳಿಂದ ಪುಣ್ಯಕೋಟಿ ನಾಟಕ ಏರ್ಪಡಿಸಲಾಗಿದೆ.
   
ಯುವದಸರಾ :- ಅಕ್ಟೋಬರ್ 4 ರಂದು ಸಂಜೆ 5-30 ಗಂಟೆಗೆ ಯುವ ಸಂಭ್ರಮದಲ್ಲಿ ಆಯ್ಕೆಯಾದ ವಿವಿಧ ಕಾಲೇಜು ವಿದ್ಯಾರ್ಥಿಗಳಿಂದ ಎಸ್.ಡಿ.ಎಂ.ಎಂ.ಎಂ.ಕೆ. ಜೆ.ಎಸ್.ಎಸ್. ಮಹಿಳಾ ಪದವಿ ಪೂರ್ವ ಕಾಲೇಜು, ಸೇವಾಭಾರತಿ ಪ್ರಥಮ ದರ್ಜೆ ಕಾಲೇಜು, ಹೊಸಮಠ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜು, ಕೆ.ಪುಟ್ಟಸ್ವಾಮಿ ಪ್ರಥಮ ದರ್ಜೆ ಕಾಲೇಜು,ಕೌಟಿಲ್ಯ ಪ್ರಥಮ ದರ್ಜೆ ಕಾಲೇಜು, ವಿದ್ಯಾವಿಕಾಸ ಬಿ.ಎಡ್. Pಕಾಲೇಜುಗಳಿಂದ  ಕಾರ್ಯಕ್ರಮ ನಡೆಯಲಿದೆ. ಸಂಜೆ 7-20 ಗಂಟೆಗೆ ರಾಘವ ಡ್ಯಾನ್ಸ್ ಅಕಾಡೆಮಿ ಅವರಿಂದ ನೃತ್ಯ ಕಾರ್ಯಕ್ರಮ, ಸಂಜೆ 7-40 ಗಂಟೆಗೆ ಹಾಸನದ ಭಾರತೀಯ ಸಂಗೀತ ನೃತ್ಯ ಶಾಲಾ ವತಿಯಿಂದ ಕರ್ನಾಟಕ ವೈಭವ ನೃತ್ಯ ರೂಪಕ  ಹಾಗೂ ಸಂಜೆ 8 ಗಂಟೆಗೆ ರಘು ಧೀಕ್ಷಿತ  ಹಾಗೂ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಗೋಲ್ಡ್ ಕಾರ್ಡ್” ಸೌಲಭ್ಯ
      ಜಿಲ್ಲಾಡಳಿತದ ವತಿಯಿಂದ ದಸರಾ ಮಹೋತ್ಸವ-2016ರ ಸಂದರ್ಭದಲ್ಲಿ ಪ್ರವಾಸಿಗರಿಗಾಗಿ “ಗೋಲ್ಡ್ ಕಾರ್ಡ್” ಸೌಲಭ್ಯವನ್ನು ಕಲ್ಪಿಸಲಾಗಿದ್ದು, ಗೋಲ್ಡ್ ಕಾರ್ಡ್ ದರ ರೂ. 7500/-ಗಳು, ಇಬ್ಬರು ವಯಸ್ಕರು ಮತ್ತು ಒಂದು ಮಗು (6 ವರ್ಷದೊಳಗೆ) ಉಪಯೋಗಿಸಿಕೊಳ್ಳಬಹುದು.
     ದಿನಾಂಕ 01.10.2016 ರಿಂದ 11.10.2016ರವರೆಗೆ ಮೈಸೂರು ಪ್ರವಾಸಿ ತಾಣಗಳಾದ ಮೈಸೂರು ಅರಮನೆ, ಶ್ರೀ ಜಯಚಾಮರಾಜೇಂದ್ರ ಮೃಗಾಲಯ, ಜಗನ್‍ಮೋಹನ್ ಪ್ಯಾಲೇಸ್, ಕಾರಂಜಿ ಕೆರೆ, ರೀಜಿನಲ್ ಮ್ಯೂಸಿಯಂ ನ್ಯಾಚುರಲ್ ಹಿಸ್ಟರಿ, ರಂಗನತಿಟ್ಟು, ಬೃಂದಾವನ ಉದ್ಯಾನವನ (ಕೆ.ಆರ್.ಎಸ್), ಶ್ರೀ ಚಾಮುಂಡೇಶ್ವರಿ ದೇವಸ್ಥಾನ, ಚಾಮುಂಡಿ ಬೆಟ್ಟ (ವಿ.ಐ.ಪಿ. ದರ್ಶನ), ಸೆಂಟ್ ಫಿಲೋಮಿನಾ ಚರ್ಚ್‍ಹಾಗೂ ದಸರಾ ವಸ್ತುಪ್ರದರ್ಶನಕ್ಕೆ ಉಚಿತ ಪ್ರವೇಶ ಇರುತ್ತದೆ. ಗೋಲ್ಡಾನ್ ಕಾರ್ಡ್‍ನಲ್ಲಿ  ಅಕ್ಟೋಬರ್ 11, 2016ರ ಬೆಳಿಗ್ಗೆ 11.00 ಘಂಟೆಗೆ ದಸರಾ ಮೆರವಣಿಗೆ  ಜಂಬೂ ಸವಾರಿಗೆ ಹಾಗೂ ಅಕ್ಟೋಬರ್ 11, 2016ರಂದು ಸಂಜೆ 7.00 ಘಂಟೆಗೆ ಬನ್ನಿಮಂಟಪದಲ್ಲಿ ಪಂಜಿನ ಕವಾಯತು ಕಾರ್ಯಕ್ರಮ ವೀಕ್ಷಣೆಗೆ ಇಬ್ಬರಿಗೆ ಅವಕಾಶವಿರುತ್ತದೆ.
    ಟಿಕೇಟ್ ನ್ನು ಮೈಸೂರು ಜಿಲ್ಲಾಧಿಕಾರಿಗಳ ಕಛೇರಿ ಹಾಗೂ ಪ್ರವಾಸೋದ್ಯಮ ಇಲಾಖೆ, ಉಪ ನಿರ್ದೇಶಕರ ಕಛೇರಿಯಲ್ಲಿ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ : 0821- 2422096 ಯನ್ನು ಸಂಪರ್ಕಿಸಬಹುದು ಆನಲೈನ್ ಮೂಲಕ ಬುಕ್ ಮಾಡಲು ತಿತಿತಿ.mಥಿsoಡಿeಜಚಿsಚಿಡಿಚಿ.gov.iಟಿ
“ಪ್ಯಾಲೇಸ್ ಆನ್ ವೀಲ್ಸ್: ಟಿಕೇಟ್ ಕಾಯ್ದಿರಿಸಿ
ಈ ಬಾರಿಯ ದಸರಾ ಮಹೋತ್ಸವ-2016ರ ಸಂದರ್ಭದಲ್ಲಿ ಪ್ರವಾಸಿಗರಿಗಾಗಿ ಜಿಲ್ಲಾಡಳಿತದ ವತಿಯಿಂದ ಅರಮನೆಗಳ ನಗರ ಮೈಸೂರಿನಲ್ಲಿ ಕೆ.ಎಸ್.ಆರ್.ಟಿ.ಸಿ ವೋಲ್ವೋ ಬಸ್ಸುಗಳಲ್ಲಿ “ಪ್ಯಾಲೇಸ್ ಆನ್ ವೀಲ್ಸ್” ಎಂಬ ವಿಶೇಷ ಕಾರ್ಯಕ್ರಮವನ್ನು ಮಾನ್ಯ ಶ್ರೀ ಸೋಮಶೇಖರ್ ಕೃಷ್ಣರಾಜ ಕ್ಷೇತ್ರ, ಶಾಸಕರು, ಮಾನ್ಯ ಶ್ರೀ ವಾಸು,               ಚಾಮರಾಜ ಕ್ಷೇತ್ರ, ಶಾಸಕರು ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು, ಮೈಸೂರು ಜಿಲ್ಲೆ, ಮೈಸೂರುರವರು ದಿನಾಂಕ 02.10.2016 ರಂದು ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದ್ದಾರೆ. ಈ ವಿನೂತನ ಒಂದು ದಿನದ ಪ್ರವಾಸಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಈಗಾಗಲೇ ಅನೇಕ ಪ್ರವಾಸಿಗರು ಈ ಪ್ರವಾಸಕ್ಕಾಗಿ ಟಿಕೇಟ್ ಅನ್ನು ಕಾಯ್ದಿರಿಸಿರುತ್ತಾರೆ. ಈ ಪ್ರವಾಸ ಕಾರ್ಯಕ್ರಮವು ದಿನಾಂಕ 09.10.2016ರಂದು  ಮುಕ್ತಾಯವಾಗುವುದರಿಂದ ಆಸಕ್ತ ಪ್ರವಾಸಿಗರು ತಮ್ಮ ಟಿಕೇಟ್ ಅನ್ನು ತಿತಿತಿ.ಞsಡಿಣಛಿ.iಟಿ ನÀಲ್ಲಿ ಕಾಯ್ದಿರಿಸಿಕೊಳ್ಳಬಹುದಾಗಿದೆ.
ಈ ವಿನೂತನ ಪ್ರವಾಸದಲ್ಲಿ ಪ್ರವಾಸಿಗರಿಗಾಗಿ ಉಚಿತ ವೈ-ಫೈ ಸೌಲಭ್ಯ, ಸಿಹಿ-ತಿನಿಸು ಮತ್ತು ಸ್ಮರಣಿಕೆಯನ್ನು ಒದಗಿಸಲಾಗುತ್ತಿದೆ. ವೈ-ಫೈ ಸೌಲಭ್ಯದ ಪ್ರಾಯೋಜಕತ್ವವನ್ನು ರಿಲಯನ್ಸ್ ಜಿಯೋ, ಸಿಹಿ-ತಿನಿಸು ಪ್ರಾಯೋಜಕತ್ವವನ್ನು ಮಹಾಲಕ್ಷ್ಮಿ ಸ್ವೀಟ್ಸ್, ಮೈಸೂರುರವರು ಸ್ಮರಣಿಕೆಯನ್ನು ದೇಸೀ ಅಡ್ಡಾ ಮೈಸೂರುರವರು ಹಾಗೂ ಪ್ರಿಂಟ್ ಪ್ರಾಯೋಜಕತ್ವವನ್ನು ಆ್ಯಡ್ಸ್ ಇಂಡಿಯಾ, ಮೈಸೂರುರವರು ವಹಿಸಿಕೊಂಡಿರುತ್ತಾರೆ.  ಹೆಚ್ಚಿನ ಮಾಹಿತಿಗೆ ಪ್ರವಾಸೋದ್ಯಮ ಇಲಾಖೆ,# 2, ಹೋಟೆಲ್ ಮಯೂರ ಹೊಯ್ಸಳ ಕಾಂಪ್ಲೆಕ್ಸ್,ಜೆ.ಎಲ್.ಬಿ. ರಸ್ತೆ, ಮೈಸೂರು – 570005 ದೂರವಾಣಿ ಸಂಖ್ಯೆ : 0821- 2422096 7760990820 ಯನ್ನು ಸಂಪರ್ಕಿಸುವುದು.
ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಿ
2014-15ನೇ ಸಾಲಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಮೈಸೂರು ವಿಭಾಗ ಮಟ್ಟದಲ್ಲಿ                   ಸಂಯುಕ್ತ ಸ್ಫರ್ಧಾತ್ಮಕ ಪರೀಕ್ಷೆಯ ಮೂಲಕ ಸರ್ಕಾರಿ ಪ್ರೌಢಶಾಲೆಗಳು, ಆಂಗ್ಲ ಮಾಧ್ಯಮದ ಆದರ್ಶ ವಿದ್ಯಾಲಯಗಳು ಮತ್ತು ಆರ್.ಎಂ.ಎಸ್.ಎ. ಅಡಿಯಲ್ಲಿ ಉನ್ನತೀಕರಿಸಲಾದ  ಸರ್ಕಾರಿ ಪ್ರೌಢಶಾಲಾ ಸಹಾಯಕ ಶಿಕ್ಷಕರು ಗ್ರೇಡ್-2 ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-1 ವೃಂದದ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಶಿಕ್ಷಕರನ್ನು ಆಯ್ಕೆ ಮಾಡುವ ಕುರಿತು ಪರಿಷ್ಕøತ ತಿದ್ದುಪಡಿ ಅಧಿಸೂಚನೆಯಂತೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ದಿನಾಂಕ 29-09-2016ರಂದು ಇಲಾಖಾ ವೆಬ್‍ಸೈಟ್‍ನಲ್ಲಿ ಪ್ರಕಟಿಸಿ, ಬಾಧಿತ ಅಭ್ಯರ್ಥಿಗಳಿಂದ ಆಕ್ಷೇಪಣೆಯನ್ನು ಕರೆಯಲಾಗಿದೆ. ಆಕ್ಷೇಪಣೆಗಳನ್ನು ಆಯ್ಕೆ ಪ್ರಾಧಿಕಾರಿ ಹಾಗೂ ವಿಭಾಗೀಯ ಕಾರ್ಯದರ್ಶಿಗಳು ಹಾಗೂ ಪದನಿಮಿತ್ತ ಜಂಟಿನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಮೈಸೂರು ವಿಭಾಗ, ಮೈಸೂರು ಇವರಿಗೆ ದಿನಾಂಕ 14-10-2016ರ ಸಂಜೆ 5:30 ಗಂಟೆಯೊಳಗೆ (ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ) ನಿಗದಿತ ನಮೂನೆಯಲ್ಲಿ ಪೂರಕ ದಾಖಲೆಗಳೊಂದಿಗೆ ಆಕ್ಷೇಪಣೆಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬಹುದಾಗಿದೆ. ಆಕ್ಷೇಪಣೆ ಸಲ್ಲಿಸುವ ನಮೂನೆಯನ್ನು ತಿತಿತಿ.sಛಿhooಟeಜuಛಿಚಿಣioಟಿ.ಞಚಿಡಿ.ಟಿiಛಿ.iಟಿ ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ.
ಆನೆ ದಿನಾಚರಣೆ
ವನ್ಯ ಜೀವಿ ಸಪ್ತಾಹದ ಅಂಗವಾಗಿ ದಿನಾಂಕ 4-10-2016 ರಂದು ಬೆಳಿಗ್ಗೆ 9 ಗಂಟೆಗೆ ಮೈಸೂರು ಅರಮನೆ ಮುಂಭಾಗದಿಂದ ಆನೆಗಳು ಹಾಗೂ ಕಾಲೇಜು ವಿದ್ಯಾರ್ಥಿಗಳ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ. ಮೆರವಣಿಗೆ ಕೆ.ಆರ್.ವೃತ್ತ, ಬಾಟಾ ಸರ್ಕಲ್ ಮುಖಾಂತರ ಬನ್ನಿಮಂಟಪದವರೆಗೆ ಸಾಗಲಿದೆ ಎಂದು ಉಪಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶೇಷ ಪ್ಯಾಕೇಜ್ ಟೂರ್ ಸೌಲಭ್ಯ
ದಸರಾ ದರ್ಶನ 2016ರ ಪ್ರಯುಕ್ತ ಕ.ರಾ.ರ.ಸಾ.ನಿಗಮ ವತಿಯಿಂದ ಮೈಸೂರು ಹಾಗೂ ಸುತ್ತಮುತ್ತಲಿನ ಪ್ರೇಕ್ಷಣೀಯ ಮತ್ತು ಸಾಂಸ್ಕøತಿಕ ಸ್ಥಳಗಳ ವೀಕ್ಷಣೆಗಾಗಿ “ ಗಿರಿದರ್ಶಿನಿ, ಜನದರ್ಶಿನಿ, ದೇವದರ್ಶಿನಿ ”  ಎಂಬ ವಿಶೇಷ ಪ್ಯಾಕೇಜ್ ಟೂರ್ ಸೌಲಭ್ಯವನ್ನು  ದಿ: 7/10/2016 ರಿಂದ 17/10/2016ರ ವರೆಗೆ ಕಲ್ಪಿಸಲಾಗಿದೆ.
 ಬನ್ನಿ ದಸರಾ ಸಂದರ್ಭದಲ್ಲಿ ಈ ವಿಶೇಷ ಕೊಡುಗೆಯೊಂದಿಗೆ ಕಣ್ಮನ ತಣಿಸುವ ಸುಂದರ ಸ್ಥಳಗಳನ್ನು ವೀಕ್ಷಿಸಿ ವಿಶೇಷ ಪ್ರವಾಸಿ ಪ್ಯಾಕೇಜ್‍ಗಳ ಮಾಹಿತಿಯು ಈ ಕೆಳಕಂಡಂತಿದೆ.
ಕ್ರ.ಸಂ. ಪ್ಯಾಕೇಜ್ ಟೂರ್ ನೋಡುವ ಸ್ಥಳಗಳು ಸಮಯ ಮತ್ತು ಕಿ.ಮೀ ಪ್ರಯಾಣ ದರ ನಿರ್ಗಮನದ ಸ್ಥಳ
1 ಗಿರಿ ದರ್ಶಿನಿ ಬಂಡೀಪುರ, ಗೋಪಾಲಸ್ವಾಮಿಬೆಟ್ಟ, ಬಿಳಿಗಿರಿರಂಗನಬೆಟ್ಟ, ನಂಜನಗೂಡು. ಚಾಮುಂಡಿಬೆಟ್ಟ. 325 ಕಿ.ಮೀ. ನಿರ್ಗಮನ ಬೆಳಿಗ್ಗೆ 6.30 ಕ್ಕೆ ದೊಡ್ಡವರಿಗೆ-350
ಮಕ್ಕಳಿಗೆ-175 ಮೈಸೂರು ಕೇಂದ್ರಿಯ ಬಸ್ ನಿಲ್ದಾಣ
2 ಜಲ ದರ್ಶಿನಿ ಗೋಲ್ಡನ್ ಟೆಂಪಲ್, ದುಬಾರೆ ಅರಣ್ಯ, ನಿಸರ್ಗಧಾಮ, ಅಭಿಜಲಪಾತ, ರಾಜಸೀಟ್, ಹಾರಂಗಿ ಜಲಾಶಯ, ಕೆ.ಆರ್.ಎಸ್ 350 ಕಿ.ಮೀ. ನಿರ್ಗಮನ ಬೆಳಿಗ್ಗೆ 6.30 ದೊಡ್ಡವರಿಗೆ-375
ಮಕ್ಕಳಿಗೆ-190 ಮೈಸೂರು ಕೇಂದ್ರಿಯ ಬಸ್ ನಿಲ್ದಾಣ
3 ದೇವ ದರ್ಶಿನಿ ನಂಜನಗೂಡು, ತಲಕಾಡು, ಬ್ಲಫ್, ಮೂಡುಕುತೊರೆ, ಸೋಮನಾಥಪುರ, ಶ್ರೀರಂಗಪಟ್ಟಣ, ಕೆ.ಆರ್.ಎಸ್. 250 ಕಿ.ಮೀ.
ನಿರ್ಗಮನ ಬೆಳಿಗ್ಗೆ 6.30 ದೊಡ್ಡವರಿಗೆ-275
ಮಕ್ಕಳಿಗೆ-140 ಮೈಸೂರು ಕೇಂದ್ರಿಯ ಬಸ್ ನಿಲ್ದಾಣ
 
      ಮುಂಗಡ ಬುಕ್ಕಿಂಗ್ ಹಾಗೂ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 7760990822, 7760990820, 0821-2424995 ವೆಬ್‍ಸೈಟ್: ತಿತಿತಿ.ಞsಡಿಣಛಿ.iಟಿ ಸಂಪರ್ಕಿಸುವುದು.

No comments:

Post a Comment