Friday 23 June 2017

ಜೂ.25 ರಂದು ಉಪನ್ಯಾಸ ಹಾಗೂ ಕವಿಗೋಷ್ಠಿ

ಜೂ.25 ರಂದು ಉಪನ್ಯಾಸ ಹಾಗೂ ಕವಿಗೋಷ್ಠಿ
ಮಳವಳ್ಳಿ : ತಾಲೂಕು ಕÀಸ್ತೂರಿ ಸಿರಿಗನ್ನಡ ವೇದಿಕೆ ಹಾಗೂ ತಾಲೂಕು ಕರ್ನಾಟಕ ಪ್ರಾಂತ ರೈತ ಸಂಘದ ಸಂಯುಕ್ತ ಆಶ್ರಯದಲ್ಲಿ ಜೂ.25 ರಂದು ಬೆಳಿಗ್ಗೆ 10 ಗಂಟೆಗೆ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನಾಚರಣೆ,ಮೀಸಲಾತಿ ಮತ್ತು ಸಂವಿಧಾನದ ಆಶಯಗಳ ಕುರಿತು ಉಪನ್ಯಾಸ ಹಾಗೂ ಕವಿಗೋಷ್ಠಿಯು ನಡೆಯಲಿದೆ ಎಂದು ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಎನ್.ಎಲ್.ಭರತ್ ರಾಜ್ ತಿಳಿಸಿದ್ದಾರೆ.
 ಪ್ರಸಿದ್ಧ ಇತಿಹಾಸ ತಜ್ಞ ಪ್ರೊ.ಪಿ.ವಿ.ನಂಜರಾಜೇ ಅರಸ್ ಸಮಾರಂಭ ಉದ್ಘಾಟಿಸಲಿದ್ದು,ಕಸ್ತೂರಿ ಸಿರಿಗನ್ನಡ ವೇದಿಕೆಯ ಅಧ್ಯಕ್ಷೆ ಪಿ.ನಾಗರತ್ನಮ್ಮ ಅಧ್ಯಕ್ಷತೆ ವಹಿಸುವರು.ಮೀಸಲಾತಿ ಮತ್ತು ಸಂವಿಧಾನದ ಆಶಯಗಳ ಕುರಿತು ಸಾಹಿತಿ ಡಾ.ರಾಜು ಗುಂಡಾಪುರ ಉಪನ್ಯಾಸ ನೀಡುವರು.ತಾಲೂಕು ಪಂಚಾಯಿತಿ ಅಧ್ಯಕ್ಷ ಆರ್.ಎನ್.ವಿಶ್ವಾಸ್,ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ವಿ.ಕೃಷ್ಣ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
    ಬಳಿಕ ನಡೆಯಲಿರುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಜಿಲ್ಲಾ ಯುವ ಬರಹಗಾರರ ಬಳಗದ ಅಧ್ಯಕ್ಷ ಟಿ.ಸತೀಶ್ ಜವರೇಗೌಡ ವಹಿಸಲಿದ್ದು,ಚುಸಾಪ ಅಧ್ಯಕ್ಷ ಬಸಪ್ಪ ನೆಲಮಾಕನಹಳ್ಳಿ,ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ ದೇವಿ,ಕಾರ್ಯದರ್ಶಿ ಲಿಂಗರಾಜ ಮೂರ್ತಿ,ಸಂಘಟಕ ಪೊತೇರ ಮಹದೇವು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
   ಕವಿ-ಕವಿಯತ್ರಿಯರಾದ ಎಂ.ಬಿ.ರಾಮೇಗೌಡ,ನಾಗವೇಣಿ ರುದ್ರಸ್ವಾಮಿ,ಉಷಾ ನಂಜನಗೂಡು,ದಾಕ್ಷಾಯಿಣಿ,ಅನಾರ್ಕಲಿ ಸಲೀಂ,ಪುನೀತ್ ಭಾಸ್ಕರ್,ಚಿಕ್ಕರಾಜು,ಕೊ.ನಾ.ಪು.,ಸಾಲಮರದ ಸಿ.ನಾಗರಾಜು,ಶಿವಮಲ್ಲು,ಹೆಚ್.ಎನ್.ರಾಘವೇಂದ್ರ,ಕೆ.ಸಿ.ಚಲುವರಾಜು,ಪ್ರತಾಪ್ ಕಲಾವಿದ,ವಿ.ರಮೇಶ್,ಕೃಷ್ಣಸ್ವಾಮಿ,ವಸಂತ್,ಷಣ್ಮುಖಸ್ವಾಮಿ,ಸಿದ್ದರಾಜು ಕಂದೇಗಾಲ,ಕಂಠಿರಾಜ್,ಮಹೇಶ್ ತಮ್ಮ ಸ್ವರಚಿತ ಕವನ ವಾಚನ ಮಾಡುವರು.  

No comments:

Post a Comment