Tuesday, 28 April 2015

ವಾರಣಾಸಿಯಲ್ಲಿ ಸಹಾಯ ಕೇಂದ್ರ ಸ್ಥಾಪನೆ

ವಾರಣಾಸಿಯಲ್ಲಿ ಸಹಾಯ ಕೇಂದ್ರ ಸ್ಥಾಪನೆ
ನವದೆಹಲಿ. ಏ. 28:  ಭೂಕಂಪ ಸಂಭವಿಸಿದ  ಹಿನ್ನೆಲೆಯಲ್ಲಿ ನೇಪಾಳದಿಂದ   ಆಗಮಿಸುತ್ತಿರುವ ಕನ್ನಡಿಗರಿಗೆ ನೆರವಾಗಲು ಕರ್ನಾಟಕ ಸರ್ಕಾರವು ವಾರಣಾಸಿಯಲ್ಲಿ ಸಹಾಯ ಕೇಂದ್ರವನ್ನು ಸ್ಥಾಪಿಸಿದೆ    ಎಂದು ಕರ್ನಾಟಕ ಭವನದ ನಿವಾಸಿ ಆಯುಕ್ತರಾದ ಶ್ರೀಮತಿ ವಂದನಾ ಗುರ್ನಾನಿ ತಿಳಿಸಿದ್ದಾರೆ.
ಈ ಸಹಾಯ ಕೇಂದ್ರದ ಉಸ್ತುವಾರಿಕೆಗಾಗಿ ಐಎಎಸ್ ಅಧಿಕಾರಿ ಶ್ರೀ ರಮಣದೀಪ್ ಚೌದರಿ ಅವರನ್ನು ನಿಯೋಜಿಸಲಾಗಿದೆ. ಸಂಜೆ ವೇಳೆಗೆ  ಅವರು ವಾರಣಾಸಿಯನ್ನು ತಲುಪಲಿದ್ದು, ನೇಪಾಳದಿಂದ ಆಗಮಿಸುವ ಕನ್ನಡಿಗರನ್ನು ನೇರವಾಗಿ ಬೆಂಗಳೂರಿಗೆ ಕಳುಹಿಸುವ ವ್ಯವಸ್ಥೆಯನ್ನು ಈ ಸಹಾಯ ಕೇಂದ್ರದಿಂದ  ಕೈಗೊಳ್ಳಲಾಗುತ್ತದೆ.   ಅವರ ಮೊಬೈಲ್ ಸಂಖ್ಯೆ 09480683105 ಆಗಿದ್ದು, ನೇಪಾಳದಿಂದ ಕರ್ನಾಟಕಕ್ಕೆ   ನಿರ್ಗಮಿಸಲು ಯಾವುದೇ ಮಾಹಿತಿ ಇದ್ದರೆ ಅವರೊಂದಿಗೆ  ವಿನಿಯಮ ಮಾಡಿಕೊಳ್ಳಬಹುದಾಗಿದೆ. ಈ ಸಹಾಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುವಂತೆ   ಕರ್ನಾಟಕ ಭವನದ ಸ್ವಾಗತಗಾರರಾದ ಶ್ರೀ ಮಂಜೇಗೌಡ ಅವರನ್ನು ನಿಯೋಜಿಸಲಾಗಿದೆ.
ಭಾರತ ಸರ್ಕಾರವು ನೇಪಾಳದಿಂದ ಆಗಮಿಸುವ ಭಾರತೀಯರಿಗೆ ಸಾಕಷ್ಟು ಪ್ರಮಾಣದಲ್ಲಿ ವಾಹನ ವ್ಯವಸ್ಥೆಯನ್ನು ಕಲ್ಪಿಸಿದೆ. ಈ ವಾಹನಗಳು ಕಟ್ಮಂಡು, ಗೋರಕ್ ಪುರ , ವಾರಣಾಸಿ ಮಾರ್ಗವಾಗಿ ದೆಹಲಿಗೆ ಆಗಮಿಸಲಿವೆ. ಈ ವಾಹನಗಳಲ್ಲಿ ಆಗಮಿಸುವ ಕನ್ನಡಿಗರನ್ನು  ವಾರಣಾಸಿಯಿಂದ ನೇರವಾಗಿ ಬೆಂಗಳೂರಿಗೆ ಕಳುಹಿಸುವ ವ್ಯವಸ್ಥೆಯನ್ನು ಈ ಸಹಾಯ ಕೇಂದ್ರದ ಮೂಲಕ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.
 ಈಗಾಗಲೇ ನೇಪಾಳಕ್ಕೆ ತೆರಳಿರುವ  ಐಎಎಸ್ ಅಧಿಕಾರಿ  ಪಂಕಜ್ ಕುಮಾರ್ ಪಾಂಡೆ ( ಮೊ.ಸಂಖ್ಯೆ09900095440) ಹಾಗು ಐಪಿಎಸ್ ಅಧಿಕಾರಿ  ಉಮೇಶ್ ಕುಮಾರ್ (ಮೊ.ಸಂಖ್ಯೆ 09480800029) ನೇಪಾಳ ರಾಯಬಾರಿ ಕಚೇರಿಯಲ್ಲಿ ಸಮನ್ವಯತೆಯೊಂದಿಗೆ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ನೇಪಾಳದಲ್ಲಿ ಸಿಲುಕಿರುವ ಕನ್ನಡಿಗರಿಗೆ  ಸಂಬಂಧಿಸಿದಂತೆ ಯಾವುದೇ ಮಾಹಿತಿ ಇದ್ದರೆ ಇವರೊಂದಿಗೆ  ವಿನಿಮಯ ಮಾಡಿಕೊಳ್ಳಬಹುದಾಗಿದೆ. ನಿನ್ನೆಯಿಂದ 36 ಮಂದಿ ಕನ್ನಡಿಗರು ಕರ್ನಾಟಕ ಭವನಕ್ಕೆ   ಆಗಮಿಸಿದ್ದಾರೆ.  ಇಂದು ಬೆಳಿಗ್ಗೆ ಆಗಮಿಸಿದ್ದ  10 ಮಂದಿಯನ್ನು ಅವರ ಇಚ್ಚೆಯ ಮೇರೆಗೆ  ನೇರವಾಗಿ ಬೆಂಗಳೂರಿಗೆ ಕಳುಹಿಸುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
 ನೇಪಾಳದಿಂದ ಕರ್ನಾಟಕ ಭವನಕ್ಕೆ ಆಗಮಿಸುವ ಕನ್ನಡಿಗರಿಗೆ ವಸತಿ,  ಊಟೋಪಚಾರವನ್ನು ಒದಗಿಸಿ, ಅಗತ್ಯವಿದ್ದವರಿಗೆ ಚಿಕಿತ್ಸೆ ನೀಡಿ, ಅವರನ್ನು ಬೆಂಗಳೂರಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ.   ನಿವಾಸಿ ಆಯುಕ್ತರ ಮಾರ್ಗದರ್ಶನದಂತೆ ತಂಡವನ್ನು ರಚಿಸಿ, ಕರ್ನಾಟಕ ಭವನದ ಸಿಬ್ಬಂದಿಯನ್ನು ನೇಮಿಸಲಾಗಿದೆ. ವಿಮಾನ ನಿಲ್ದಾಣ,  ರೈಲು ನಿಲ್ದಾಣದಲ್ಲಿ ನಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕರ್ನಾಟಕ ಭವನದ ಅಧಿಕಾರಿಗಳು ಹಾಗು ಸಿಬ್ಬಂದಿ ವರ್ಗದರು ಸಮನ್ವಯತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ.  ರಾಜ್ಯ ಸರ್ಕಾರ, ವಿದೇಶಾಂಗ ಸಚಿವಾಲಯ, ರಾಜ್ಯದ ನೊಡೆಲ್ ಅಧಿಕಾರಿಗಳು, ಎನ್‍ಡಿಆರ್‍ಎಫ್    ಅವರೊಂದಿಗೆ ಸಮನ್ವಯತೆ ಸಾಧಿಸಲಾಗುತ್ತಿದೆ. ಯಾವುದೇ ಕರೆಗಳು ಬಂದರೂ ಸಂಭಂಧಿಸಿದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲಾಗುತ್ತಿದೆ ಎಂದು ಜಂಟಿ ನಿವಾಸಿ ಆಯುಕ್ತರಾದ ಶ್ರೀ ರಂಗಸ್ವಾಮಿ ಅವರು ತಿಳಿಸಿದರು.  

ಮೈಸೂರು

 ಅಂಗಡಿಯಲ್ಲಿ ಸೀರೆ ಕದಿಯುತ್ತಿದ್ದ ಕಳ್ಳಿಯರ ಬಂಧನ 
ಮೈಸೂರು, ಏ. 28-ಮೈಸೂರಿನ ಸೀರೆ ಮಳಿಗೆಯೊದರಲ್ಲಿ ವ್ಯಾಪಾರಕ್ಕೆ ಬಂದು ಸೀರೆಗಳನ್ನು ಕದಿಯುತ್ತಿದ್ದ ಇಬ್ಬರು ಕಳ್ಳಿಯರನ್ನು ನಜರ್‍ಬಾದ್ ಪೊಲೀಸರು ಮಾಲು ಸಮೇತ ಬಂಧಿಸಿದ್ದಾರೆ.
 ನಗರದ ಮೃಗಾಲಯ ಬಳಿಯಿರುವ ಕರ್ನಾಟಕ ಸ್ಯಾರಿಸ್ ಸೆಂಟರ್ ಎಂಬ ಅಂಗಡಿಯಗೆ ಬಂದ ಕಳ್ಳಿಯರು ಸೀರೆಗಳನ್ನು ಕೊಳ್ಳುವವರಂತೆ ನಟಿಸಿ ಸ್ಯಾರಿಗಳನ್ನು ವೀಕ್ಷಿಸುತ್ತಿದ್ದರು, ವೀಕ್ಷಿಸುತ್ತಿದ್ದಂತೆ ಅಂಗಡಿಯ ನೌಕರರ ಗಮನವನ್ನು ಬೇರೆಡೆ ಸೆಳೆದು ತಾವು ತಂದಿದ್ದ ಬ್ಯಾಗ್‍ಗಳಿಗೆ ಬೆಲೆಬಾಳುವ  5 ಸ್ಯಾರಿಗಳನ್ನು ತುರುಕಿದ್ದರು ಇದು ಅಲ್ಲಿ ಅಳವಡಿಸಲಾಗಿದ್ದ  ಸಿಸಿ ಕ್ಯಾಮರಾದಲ್ಲಿ ದಾಖಲಾಗಿತ್ತು.
 ಸೀರೆ ಕದಿಯಲು 5 ಮಂದಿ ಕಳ್ಳಿಯರು ಬಂದಿದ್ದು, ಅವರಲ್ಲಿ ಇಬ್ಬರುಮಾತ್ರ ಸಿಕ್ಕಿಹಾಕಿಕೊಂಡಿದ್ದಾರೆ, ಉಳಿದ ಮೂವರು ಪರಾರಿ ಯಾದರೆಂದು ಹೇಳಲಾಗಿದೆ. ಸಿಕ್ಕಿಕೊಂಡ ಇಬ್ಬರನ್ನು ನಜರ್‍ಬಾದ್ ಪೊಲೀಸರು ಮಾಲುಸಮೇತ ವಶಕ್ಕೆ ತೆಗೆದುಕೊಂಡು ವಿಚಾರಣೆಗಾಗಿ ಠಾಣೆಗೆ ಕರೆದೊಯ್ದಿದ್ದಾರೆ.
 ಅಂಗಡಿ ಮಾಲೀಕರು ಹೇಳುವ ಪ್ರಕಾರ ಇವರುಗಳು ಈ ಹಿಂದೆಯೇ ಇದೇ ಅಂಗಡಿಗೆ ಬಂದು ಸೀರೆಗಳನ್ನು ಕದ್ದಿದ್ದರು, ಆಗ ಸಿಕ್ಕಿಕೊಂಡಾಗ ಈ ಬ್ಯಾಗ್ ನಮ್ಮದಲ್ಲ ಎಂದು ಹೇಳಿ ತಪ್ಪಿಸಿಕೊಂಡರು. ಆಗ ಪೊಲೀಸರಿಗೆ ವಿಷಯತಿಳಿಸಿದ್ದೆವು ಅದರಂತೆ ಈ ಮಹಿಳೆಯರು ಇಂದು ಅಂಗಡಿಗೆ ಬಂದಾಗ ಪೊಲೀಸರಿಗೆ ಮಾಹಿತಿ ನೀಡಿದ್ದೆವು, ಅದರಂತೆ ಪೊಲೀಸರು ಚಾಮುಂಡಿ ಎಂಬ ಪಡೆಯನ್ನು ಮಪ್ತಿ ಉಡುಪಿನಲ್ಲಿ ಕಳುಹಿಸಿ ಇವರ ವ್ಯಾಪಾರದ ನಡವಳಿಕೆಯನ್ನು ಸಿಸಿ ಕ್ಯಾಮರಾ ಮೂಲಕ ವೀಕ್ಷಿಸುತ್ತಿದ್ದಾಗ ರೇಷ್ಮೆ ಸೀರೆಗಳನ್ನು ಬ್ಯಾಗ್‍ಗಳಿಗೆ ಸೇರಿಸುತ್ತಿದ್ದುದನ್ನು ಕಂಡು ತಕ್ಷಣ ಅವರನ್ನು ಮಾಲುಸಮೇತ ಹಿಡಿದಿದ್ದಾರೆ ಎನ್ನಲಾಗಿದೆ.
ಕಳ್ಳೀಯರು ಮೈಸೂರಿನ ಎಸ್.ಆರ್. ನಾಯ್ಡುನಗರ ವಾಸಿಗಳಾಗಿದ್ದು, ತಪ್ಪಿಸಿಕೊಂಡಿರುವ ಇತರ ಕಳ್ಳಿಯರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.  
 ಕಳ್ಳಿಯರನ್ನು ಬಂಧಿಸಿ ಶಿಕ್ಷೆ ಕೊಡಿಸುವ ಉದ್ದೇಶ ನಮಗಿಲ್ಲ ಆದರೆ ಇನ್ನು ಮುಂದೆ ಯರೂ, ಎಲ್ಲೂ ಈರೀತಿ ಕಳ್ಳತನಮಾಡದಿರಲಿ, ಬುದ್ಧಿ ಕಲಿಯಲಿ ಎಂದು  ಪೊಲೀಸರಿಗೆ  ತಿಳಿಸಿರುವುದಾಗಿ ಅಂಗಡಿ ಮಾಲೀಕರು ತಿಳಿಸಿದ್ದಾರೆ.

ಶಾಸಕ ಎಂ.ಕೆ. ಸೋಮಶೇಖರ್ ರಿಂದ ಘನ ತ್ಯಾಜ್ಯ ಘಟಕ ವೀಕ್ಷಣೆ
ಮೈಸೂರು, ಏ. 28- ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಕ ಎಂ.ಕೆ. ಸೋಮಶೇಖರ್ ರವರು ಇಂದು ತಮ್ಮ ಕಷೇತ್ರದ ವೀಕ್ಷಣೆಕಾರ್ಯದಲ್ಲಿ ತೊಡಗಿಕೊಂಡಿದ್ದು, ಅಲ್ಲಿನ ಪರಿಸ್ಥಿತಿಗಳನ್ನು ಅವಲೋಕಿಸಿದರು.
 ನತಂರ ಅವುಗಳನ್ನು ಸರಿಪಡಿಸುವಂತೆ ಸಂಬಂಧಿಸಿದ ಪಾಲಿಕೆ ಅಧಿಕಾರಿಗಳಿಗೆ  ಸೂಚಿಸಿದರು.
 ನಂತರ ಶಾಸಕರು ವಿದ್ಯಾರಣ್ಯಪ್ಮರಂ ವ್ಯಾಪ್ತಿಗೊಳಪಡುವ  ಸೂಯೇಜ್ ಫಾರಂ ಬಳಿಯ ಘನತ್ಯಾಜ್ಯ ಸಂಘ್ರಹ ಘಟಕ್ಕೆ ತೆರಳಿ ಅವಲೋಕಿಸಿದರು.
ದಿನೇ ದಿನೇ ನಗರದಲ್ಲಿ ಕಸ ಉತ್ಪತ್ತಿ ಹೆಚ್ಚುತ್ತಿದ್ದು, ಇದನ್ನು ವಿಲೆವಾರಿ ಮಾಡಲು ಕಷ್ಟಸಾದ್ಯವಾಗಿದೆ ಎಂದು ಬಂದ  ದೂರುಗಳ ಹಿನ್ನೆಲೆಯಲ್ಲಿ ಕಸ ಬೇರ್ಪಡಿಸಲು ಬೇಕಾದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ಸಚಿದರ್ಭದಲ್ಲಿ ತಿಳಿಸಿದರು.
 ಕಸ ವಿಂಗಡಿಸಿ   ಇದರಿಂದ ಗೊಬ್ಬರ ಹಾಗೂ ಇಂದ£ ತಯಾರಿಕೆಗೆ  ಸರ್ಕಾರ ಯೋಜನೆ ಹಾಕಿಕೊಂಡಿದೆ  ಎಂದು ಶಾಸಕರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಇವರೊಂದಿಗೆ ನಗರಪಾಲಿಕೆಯ ಅಧಿಕಾರಿಗಳು ಇದ್ದರು.
ಬೇಡಿಕೆಗಳ ಈಡೇರಿಕೆಗಾಗಿ ನಾಳೆ ಗ್ರಾಮ ಪಂಚಾಯಿತಿ ಪೌರಕಾರ್ಮಿಕರ ಪ್ರತಿಭಟನೆ
ಮೈಸೂರು,ಏ.28- ಮೈಸೂರು ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಚತಾ ಕಾರ್ಯ ಕೆಲಸ ಮಾಡುತ್ತಿರುವ  ಪೌರಕಾರ್ಮಿಕರ  ಸ್ಥಿತಿ ಅತಂತ್ರವಾಗಿದೆ, ಅವರ ಬದುಕು  ಇನ್ನು ಹಸನಗಿಲ್ಲ ಸರ್ಕಾರದ  ಸೌಲಭ್ಯಗಳಿಂದ ವಚಿಚಿತರಾಗಿದ್ದಾರೆ.
 ಅವರಿಗೆ ಕೆಲಸ ಖಾಯಂ ಇಲ್ಲ, ಸಸರಿಯಾದ ಸಮಯಕ್ಕೆ ಸಂಬಳ ಸಿಗುತ್ತಿಲ್ಲ, ಇಎಸ್‍ಐ, ಪಿಎಫ್ ಔಲಭ್ಯಗಳು ಸಿಗಿತ್ತಿಲ್ಲ   ಇನ್ನೂ ಹಲವಾರು ಸವಲತ್ತುಗಳಿಂದ ವಂಚಿತರಾಗಿರುವ  ಇವರ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ, ಸರ್ಕಾರದ ಗಮನ ಸೆಳೆಯುವ ಸಲುವಾಗಿ  ನಾಳೆ ಎಲ್ಲಾ ಗ್ರಾಮ ಪಂಚಾಯಿತಿಗಳ ಪೌರಕಾರ್ಮಿಕರೊಡಗೂಡಿ ಜಿಲ್ಲಾಧಿಕಾರಿ ಕಚೇರಿಯಿಂದ  ಜಿಲ್ಲಾ ಪಂಚಾಯಿತಿ ಕಚೇರಿವರೆಗೆ  ಪ್ರತಿಭಟನೆ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಆರ್ಟಿಸ್ಟ್ ನಾಗರಾಜು  ಪತ್ರಿಕಾ ಘೋಷ್ಟಿಯಲ್ಲಿ ತಿಳಿಸಿದರು.
 ಪತ್ರಿಕಾ ಘೋಷ್ಟಿಯಲ್ಲಿ ಪರಮೇಶ್, ರಾಮಮ್ಮ,ಕುಮಾರಯ್ಯ, ಮಹದೇವು, ಮಾಳಿಗಯ್ಯ ಉಪಸ್ಥಿತರಿದ್ದರು.   

 ಅಂಗಡಿಯಲ್ಲಿ ಸೀರೆ ಕದಿಯುತ್ತಿದ್ದ ಕಳ್ಳಿಯರ ಬಂಧನ
ಮೈಸೂರು, ಏ. 28-ಮೈಸೂರಿನ ಸೀರೆ ಮಳಿಗೆಯೊದರಲ್ಲಿ ವ್ಯಾಪಾರಕ್ಕೆ ಬಂದು ಸೀರೆಗಳನ್ನು ಕದಿಯುತ್ತಿದ್ದ ಇಬ್ಬರು ಕಳ್ಳಿಯರನ್ನು ನಜರ್‍ಬಾದ್ ಪೊಲೀಸರು ಮಾಲು ಸಮೇತ ಬಂಧಿಸಿದ್ದಾರೆ.
 ನಗರದ ಮೃಗಾಲಯ ಬಳಿಯಿರುವ ಕರ್ನಾಟಕ ಸ್ಯಾರಿಸ್ ಸೆಂಟರ್ ಎಂಬ ಅಂಗಡಿಯಗೆ ಬಂದ ಕಳ್ಳಿಯರು ಸೀರೆಗಳನ್ನು ಕೊಳ್ಳುವವರಂತೆ ನಟಿಸಿ ಸ್ಯಾರಿಗಳನ್ನು ವೀಕ್ಷಿಸುತ್ತಿದ್ದರು, ವೀಕ್ಷಿಸುತ್ತಿದ್ದಂತೆ ಅಂಗಡಿಯ ನೌಕರರ ಗಮನವನ್ನು ಬೇರೆಡೆ ಸೆಳೆದು ತಾವು ತಂದಿದ್ದ ಬ್ಯಾಗ್‍ಗಳಿಗೆ ಬೆಲೆಬಾಳುವ  5 ಸ್ಯಾರಿಗಳನ್ನು ತುರುಕಿದ್ದರು ಇದು ಅಲ್ಲಿ ಅಳವಡಿಸಲಾಗಿದ್ದ  ಸಿಸಿ ಕ್ಯಾಮರಾದಲ್ಲಿ ದಾಖಲಾಗಿತ್ತು.
 ಸೀರೆ ಕದಿಯಲು 5 ಮಂದಿ ಕಳ್ಳಿಯರು ಬಂದಿದ್ದು, ಅವರಲ್ಲಿ ಇಬ್ಬರುಮಾತ್ರ ಸಿಕ್ಕಿಹಾಕಿಕೊಂಡಿದ್ದಾರೆ, ಉಳಿದ ಮೂವರು ಪರಾರಿ ಯಾದರೆಂದು ಹೇಳಲಾಗಿದೆ. ಸಿಕ್ಕಿಕೊಂಡ ಇಬ್ಬರನ್ನು ನಜರ್‍ಬಾದ್ ಪೊಲೀಸರು ಮಾಲುಸಮೇತ ವಶಕ್ಕೆ ತೆಗೆದುಕೊಂಡು ವಿಚಾರಣೆಗಾಗಿ ಠಾಣೆಗೆ ಕರೆದೊಯ್ದಿದ್ದಾರೆ.
 ಅಂಗಡಿ ಮಾಲೀಕರು ಹೇಳುವ ಪ್ರಕಾರ ಇವರುಗಳು ಈ ಹಿಂದೆಯೇ ಇದೇ ಅಂಗಡಿಗೆ ಬಂದು ಸೀರೆಗಳನ್ನು ಕದ್ದಿದ್ದರು, ಆಗ ಸಿಕ್ಕಿಕೊಂಡಾಗ ಈ ಬ್ಯಾಗ್ ನಮ್ಮದಲ್ಲ ಎಂದು ಹೇಳಿ ತಪ್ಪಿಸಿಕೊಂಡರು. ಆಗ ಪೊಲೀಸರಿಗೆ ವಿಷಯತಿಳಿಸಿದ್ದೆವು ಅದರಂತೆ ಈ ಮಹಿಳೆಯರು ಇಂದು ಅಂಗಡಿಗೆ ಬಂದಾಗ ಪೊಲೀಸರಿಗೆ ಮಾಹಿತಿ ನೀಡಿದ್ದೆವು, ಅದರಂತೆ ಪೊಲೀಸರು ಚಾಮುಂಡಿ ಎಂಬ ಪಡೆಯನ್ನು ಮಪ್ತಿ ಉಡುಪಿನಲ್ಲಿ ಕಳುಹಿಸಿ ಇವರ ವ್ಯಾಪಾರದ ನಡವಳಿಕೆಯನ್ನು ಸಿಸಿ ಕ್ಯಾಮರಾ ಮೂಲಕ ವೀಕ್ಷಿಸುತ್ತಿದ್ದಾಗ ರೇಷ್ಮೆ ಸೀರೆಗಳನ್ನು ಬ್ಯಾಗ್‍ಗಳಿಗೆ ಸೇರಿಸುತ್ತಿದ್ದುದನ್ನು ಕಂಡು ತಕ್ಷಣ ಅವರನ್ನು ಮಾಲುಸಮೇತ ಹಿಡಿದಿದ್ದಾರೆ ಎನ್ನಲಾಗಿದೆ.
ಕಳ್ಳೀಯರು ಮೈಸೂರಿನ ಎಸ್.ಆರ್. ನಾಯ್ಡುನಗರ ವಾಸಿಗಳಾಗಿದ್ದು, ತಪ್ಪಿಸಿಕೊಂಡಿರುವ ಇತರ ಕಳ್ಳಿಯರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
 ಕಳ್ಳಿಯರನ್ನು ಬಂಧಿಸಿ ಶಿಕ್ಷೆ ಕೊಡಿಸುವ ಉದ್ದೇಶ ನಮಗಿಲ್ಲ ಆದರೆ ಇನ್ನು ಮುಂದೆ ಯರೂ, ಎಲ್ಲೂ ಈರೀತಿ ಕಳ್ಳತನಮಾಡದಿರಲಿ, ಬುದ್ಧಿ ಕಲಿಯಲಿ ಎಂದು  ಪೊಲೀಸರಿಗೆ  ತಿಳಿಸಿರುವುದಾಗಿ ಅಂಗಡಿ ಮಾಲೀಕರು ತಿಳಿಸಿದ್ದಾರೆ.
   

ಮಂಡ್ಯ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಶೋಷಣೆಗೆ ಒಳಗಾಗಿ ಒಳ್ಳೆಯ ಶಿಕ್ಷಣ ಪಡೆದು ಈ ದೇಶದಲ್ಲಿ ಮಹಾನ್ ಜ್ಞಾನಿಯಾದ ಮಹಾ ಮಾನವತಾವಾದಿ ಎಂದು ಜಿ.ಪಂ. ಮಾಜಿ ಅಧ್ಯಕ್ಷ ಸುರೇಶ್ ಕಂಠಿ ತಿಳಿಸಿದರು.
ನಗರದ ಗಾಂಧಿ ಭವನದಲ್ಲಿ ಜಿಲ್ಲಾ ಪ್ರಾಥಮಿಕ ಹಾಗೂ ಮಾಧ್ಯಮಿಕ ಪರಿಶಿಷ್ಟ ಜಾತಿ, ಪಂಗಡದ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಡೆದ ಸಂವಿಧಾನ ಶಿಲ್ಪಿ ಡಾ. ಂಬೇಡ್ಕರ್ ಅವರ 124ನೇ ಜಯಂತ್ಯೋತ್ಸವ ಹಾಗೂ ಬಸವಣ್ಣ, ಬಾಬು ಜಗಜೀವನರಾಂ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಭಾರತದಲ್ಲಿ ಅನಿಷ್ಠ ಪದ್ಧತಿಯನ್ನು ಹೋಗಲಾಡಿಸಲು ಅಂಬೇಡ್ಕರ್ ಅವರು ಪಟ್ಟ ಶ್ರಮ ಅಷ್ಟಿಷ್ಟಲ್ಲಾ, ದೇಶ ವಿದೇಶಗಳಿಗೆ ಹೋಗಿ ಜ್ಞಾನ ಸಂಪಾದನೆ ಮಾಡಿ ಅನಿಷ್ಠ ಪದ್ಧತಿ ವಿರುದ್ಧ ಹೋರಾಟ ಮಾಡಿದರು ಎಂದು ಬಣ್ಣಿಸಿದರು.
ಪ್ರತಿಯೊಂದು ಇಲಾಖೆಯೂ ಇಂದು ಖಾಸಗೀಕರಣಗೊಳ್ಳುತ್ತಿದೆ. ಇದರಿಂದ ಎಚ್ಚಗೊಳ್ಳುವುದು ಅಗತ್ಯವಿದೆ. ಎಚ್ಚರಗೊಳಿಸುವ ಶಕ್ತಿ ಶಿಕ್ಷಕರಲ್ಲಿದೆ. ಸಮಾಜದ ಯುವ ಪೀಳಿಗೆಗೆ ದೇಶದ ಸ್ಥಿತಿಗತಿಗಳನ್ನು ಅರ್ಥ ಮಾಡಿಸುವುದು ಶಿಕ್ಷಕರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
12ನೇ ಶತಮಾನದಲ್ಲಿ ಬಸವಣ್ಣನವರು ಸಮಾನತೆಗಾಗಿ ಹೋರಾಟ ನಡೆಸಿದರು. ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನರಾಂ ಅವರು ದೇಶದ ಉಪ ಪ್ರಧಾನಿಯಾಗಿ ಆಹಾರ ಭದ್ರತೆಯಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡಿದರು. ಇಂತಹ ಮಹನೀಯರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಘದ ಅಧ್ಯಕ್ಷ ಎಲ್.ಜೆ. ಶಂಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ಶಿವಲಿಂಗಯ್ಯ, ಖಜಾಂಚಿ ಶಿವಣ್ಣ, ಜಿ.ಪಂ. ಸದಸ್ಯ ಶಿವಣ್ಣ, ಡಯಟ್ ಪ್ರಾಂಶುಪಾಲರಾದ ಭಾರತಿ, ನಾಗಮಂಗಲ ಬಿಇಓ ಅಂತರಾಜು, ಕಾಂಗ್ರೆಸ್ ಮುಖಂಡ ಆನಂದ್‍ಕುಮಾರ್ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

Monday, 27 April 2015

ವೃದ್ದಾಪ್ಯದಲ್ಲಿರುವವರಿಗೆ ಸರ್ಕಾರ ಸವಲತ್ತು ಕಲ್ಪಿಸಬೇಕು- ಪುಷ್ಪ ಮರ್‍ನಾಥ್
ಮೈಸೂರು,ಏ.27- ಮನುಷ್ಯನಿಗೆ 55 ರಿಂದ 60 ವರ್ಷ ವಯಸ್ಸು ಮೀರಿದ ಕೂಡಲೇ  ವೃದ್ಧರು ಎಂಬ ಕಾರಣಕ್ಕೆ ಮಕ್ಕಳಿಮದ, ಸೊಸೆಯಂದಿರಿಂದ ನಿರ್ಲಕ್ಷ್ಯಕ್ಕೊಳಗಾಗುತ್ತಾರೆ ಅಚಿಥ ಸಂದರ್ಭದಲ್ಲಿ  ಅವರಿಗೆ ಒಂಟಿತನ ಕಾಡುತ್ತಿರುತ್ತದೆ, ಯಾರಾದರೂ ಆಶ್ರಯಕ್ಕೆ ಬರಬಹುದೆಂದು ವೃದ್ಧ ಜೀವಗಳು ಹಂಬಲಿಸುತ್ತಿರುತ್ತವೆ ಆದ್ದರಿಂದ ಸರ್ಕಾರ ಇಂಥವರ ನೆರವಿಗೆ ಬರಲು ಸರ್ಕಾರ ಯೋಜೆ ರೂಪಿಸಬೆಕು ಎಂದು  ಮೈಸೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ಅಮರ್‍ನಾಥ್ ತಿಳಿಸಿದರು.
 ಮೈಸೂರಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವತಿಯಿಂದ  ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಿದ್ದ, ವೃದ್ಧಾಪ್ಯದಲ್ಲಿ ಆರೋಗ್ಯ ನಿರ್ವಹಣೆ ಎಂಬ ಕಾರ್ಯಾಗಾರ ಕಾರ್ಯಕ್ರಮ  ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ತಮ್ಮ ಮಕ್ಕಳಿಂದ ನಿರ್ಲಕ್ಷಿಸಲ್ಪಟ್ಟ ತಂದೆ ತಾಯಿಗಳು  ಆಶ್ರಯ ಕಾಣದೆ ಪರಿತಪಿಸುವಾಗ ಅವರ ಸಹಾಯಕ್ಕೆ ವ್ಯದ್ಧಾಶ್ರಮಗಳು ಬರುತ್ತವೆ, ಇವುಗಳ ನಿರ್ವಹಣೆಗೆ ದಾನಿಗಳು ಇರುತತಾರೆ ಆದರೆ ಅದು ಶಾಶ್ವತವಗಿರುವುದಿಲ್ಲ, ಆದಕಾರಣ ಸರ್ಕಾರ ಇವರ ನೆರವಿಗೆ ಬರಬೇಕು ಎಂದರು.
 ಸರ್ಕಾರ ಈಗಾಗಲೇ  ಮಕ್ಕಳ ಕಲ್ಯಾಣಕ್ಕೆ , ಮಹಿಳೇಯರ ಹಿತಕಾಯಲು, ವಿಕಲಚೇತನರ,  ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ತಂದಿದೆ  ಆದರೆ ಮಕ್ಕಳಿಂದ ಹೊರಹಾಕಿ ಬಂದ  ವೃದ್ಧರ ಏಳಿಗೆಗಾಗಿ  ಸಕಾರ ಯಾವುದೇ  ಯೋಜನೆ ಹಾಕಿಕೊಂಡಿಲ್ಲ ಆದ್ದರಿಂದ  ಇಚಿತಹ ನಿರ್ಗತಿಕರ ಕಲ್ಯಾಣಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸಬೇಕು, ಅವರಿಗೂ  ಅವರ ಜೀವಿತಾವಧಿವರೆಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸುವಂತಾಗಬೇಕು ಎಂದು  ಹೇಳಿದರು.
   ವೃದ್ಧಾಪ್ಯದಲ್ಲಿ ಆರೋಗ್ಯದಲ್ಲಿ ವ್ಯತ್ಯಾಸಗಳಾಗುವುದು ಸಹಜ, ಆದ್ದರಿಂದ ಅವರ ಆರೋಗ್ಯ ಸುಧಾರಣೆ ಅಗತ್ಯ, ಈ ಬಗ್ಗೆ ತಿಳಿಸಿಕೊಡಲು ಬ್ರಹ್ಮಕುಮಾರಿ ಸಂಸ್ಥೆ ಈ ಕಾರ್ಯಗಾರ ಏರ್ಪಡಿಸಿರುವುದು ಶ್ಲಾಘನೀಯ ಹಾಗೂ ಸ್ಮರಿಸತಕ್ಕದ್ದು  ಎಂದರು.
 ಹಿಂದೆ ಹಿರಿಯರಿಗೆ  ವೃದ್ಧರಿಗೆ ಹೆಚ್ಚು ಗೌರವ ಕೊಡುತ್ತಿದ್ದರು, ಆದರೆ ಈಗಿನ ಯುವಕರು ಹಿರಿಯರನ್ನು ಗೌರವಿಸದೇ ಅಸಗೌರವದಿಮದ ಕಾಣುತ್ತಿದ್ದಾರೆ ಈರೀತಿ ಯಾಕೆ ಆಗುತ್ತಿದೆ  ಎಂದು ಚಿಂತಿಸಿ ಯುವಕರಲ್ಲಿ ಜಾಗೃತಿಮೂಡಿಸಬೇಕಿದೆ ಎಂದು ವಿಷಾದ ವ್ಯಕ್ತಪಡಿಸಿದರು.
 ವಿದ್ಯವಚಿತ ಹೆಣುಮಕ್ಕಳು ಕೂಡ ವಯಸ್ಸಾದ ತಮ್ಮ ಅತ್ತೆ ಮಾವಂದಿರ ಬಳಿ ತಮ್ಮ ಮಕ್ಕಳನ್ನು ಸೇರಲು ಬಿಡುವುದಿಲ್ಲ, ಕಾರಣ ಅವರ ಆರೋಗ್ಯದ ಮೇಲಿನ ಪರಿಣಾಮವಾಗಿರುತ್ತದೆ ಆದ್ದರಿಂದ ವೃದ್ಧಾಪ್ಯದಲ್ಲಿ ಅವರ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತಿ ಅವಶ್ಯ, ಅಲ್ಲದೇ ಮಕ್ಕಳು ತಾತ ಅಜ್ಜಿಯರೊಂದಿಗೆ  ಬೆರೆತರೆ ಮೊಮ್ಮಕ್ಕಳಿಗೆ ಪ್ರೀತಿಯಿಂದ  ಒಳ್ಳೆಯ ಸಂಸ್ಕøತಿ ಕಲಿಸುತ್ತಾರೆ, ಒಳ್ಳೆತನವನ್ನು ಹೇಳಿಕೊಡುತ್ತಾರೆ ಆದ್ದರಿಂದ ಹಿರಿಯರಿಗೆ ಪೂರಕ ಬೆಂಬಲ ಸ್ರಚಿಸುವುದು ಅಗತ್ಯ ಎಂದರಲ್ಲದೇ, ಆರೋಗ್ಯವಚಿತ ಸಮಾಜ ಪ್ರತೀ ಮನೆಯಲ್ಲೂ ಬರಬೇಕು, ಒಂಟಿತನವನ್ನು ಮೀರಿ ಜೀವನ ನಡೆಸುವುದನ್ನು ಬೆಳೆಸಿಕೊಳ್ಳಬೇಕು, 55 ಆದತಕ್ಷಣ ನನಗೆ ವಯಸ್ಸಾಯಿತು ಎಂದು ಭಾವಿಸಬಾರದು, ಆರೋಗ್ಯದಕಡೆ ಗಮನಹರಿಸಬೇಕು, ಅದಕ್ಕಾಗಿ ಇಂಥಹ ಕಾರ್ಯಗಾರಗಳು ಆಗಾಗ ನಡೆಯುತ್ತಿರಬೇಕು ಸಲಹೆ ನೀಡಿದರು.
 ಕಾರ್ಯಕ್ರಮದಲ್ಲಿ  ಗ್ಲೋಬಲ್ ಆಸ್ಪತ್ರೆಯ ವೃದ್ಧರೋಗ ತಜ್ಞ ಹಾಗೂ ಚಿಕಿತ್ಸಕ ಡಾ. ಮಹೇಶ್ ಹೇಮಾದ್ರಿ, ಬ್ರಹ್ಮಕುಮಾರಿ ವಿವಿಯ ಮುಖ್ಯಸ್ಥೆ ರಾಜಯೋಗಿನಿ ಬಿ.ಕೆ. ಲಕ್ಷೀಜಿ, ಕಾರ್ಯದರ್ಶಿ ರಂಗನಾಥ್ ಉಪಸ್ಥಿತರಿದ್ದರು.

Sunday, 26 April 2015

ಸಾಮಾಜಿಕ ಮತ್ತುಶೈಕ್ಷಣಿಕ ಸಮೀಕ್ಷೆ: ಸಮಾಜ ಕಲ್ಯಾಣ ಇಲಾಖೆ ಸಚಿವರಿಂದ ಪರಿಶೀಲನೆ
ಮಂಡ್ಯ.ಏ.26.ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಅಲೆಮಾರಿ ಜನಾಂಗದವರನ್ನು ನಿರ್ಲಕ್ಷ ವಹಿಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ ಅವರು ಶ್ರೀರಂಗಪಟ್ಟಣ ತಾಲೂಕಿನ ಗಾಮನಹಳ್ಳಿಯಲ್ಲಿ ಅಲೆಮಾರಿ ಜನರನ್ನು ಭೇಟಿ ಮಾಡಿ ಮಾಹಿತಿ ಪಡೆದರು.

  ಗಣತಿದಾರರು ಬಂದು ಮಾಹಿತಿ ಪಡೆದರು ಎಂದು ಅಲೆಮಾರಿಗಳು ಸಚಿವರಿಗೆ ತಿಳಿಸಿದರು. ಬಳಿಕ ಗಣತಿದಾರರಿಗೆ ಸೂಚನೆ ನೀಡಿದ ಸಚಿವರು, ಅಲೆಮಾರಿಗಳು ಯಾವ ಜಾತಿಗೆ ಸೇರಿದವರು ಎಂಬುದನ್ನು ನಿಖರ ಮಾಹಿತಿ ದಾಖಲು ಮಾಡಬೇಕು ಎಂದರು.

   ಅಲೆಮಾರಿ ಮತ್ತು ಹಕ್ಕಿಪಿಕ್ಕಿ ಜನಾಂಗದವರ ಶೈP್ಷÀಣಿಕ ಮಟ್ಟ, ಕುಡಿವ ನೀರಿನ ಸ್ಥಿತಿ ಬಗ್ಗೆ ಮಾಹಿತಿ ಇರಬೇಕು. ರೈಲ್ವೆ, ಬಸ್ ನಿಲ್ದಾಣ ಹಾಗೂ ರಸ್ತೆ ಬದಿಗಳಲ್ಲಿ ಭಿಕ್ಷೆ ಬೇಡುವವರನ್ನು ಸಮೀಕ್ಷೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದರು.

    . ಗಾಮನಹಳ್ಳಿಯ ಕೆರೆ ದಡದಲ್ಲಿ ವಾಸಿಸುತ್ತಿರುವ ಅಲೆಮಾರಿ ಜನಾಂಗದವರು ಕುಡಿವ ನೀರು ಸೇರಿದಂತೆ ಯಾವೊಂದು ಸೌಲಭ್ಯಗಳಿಲ್ಲದೆ ನೆಲೆಸಿz್ದÁರೆ ಎಂದು ಬೇಸರ ವ್ಯಕ್ತಪಡಿಸಿದ ಅವರು ಗ್ರಾಮದಲ್ಲಿರುವ 10 ಕುಟುಂಬಗಳಿಗೆ ತP್ಷÀಣವೇ ನಿವೇಶನ ಗುರುತಿಸಿ ನಿರ್ಮಿತಿ ಕೇಂದ್ರ ಅಥವಾ ಭೂ ಸೇನಾ ನಿಗಮದ ವತಿಯಿಂದ ಮನೆಗಳನ್ನು ನಿರ್ಮಿಸಿಕೊಡುವಂತೆ ಜಿಲ್ಲಾಕಾರಿಗಳಿಗೆ ಸೂಚಿಸಿದ್ದರು.

 . ಅಲೆಮಾರಿ ಜನಾಂಗದವರಿಗೆ ಮನೆ ನಿರ್ಮಿಸಲು ಹಿಂದುಳಿದ ವರ್ಗಗಳ ಇಲಾಖೆಯಿಂದ ವಿಶೇಷ ಅನುದಾನ ನೀಡಲಾಗುತ್ತಿದೆ. ಸಾಮಾನ್ಯ ಬಡವರಿಗೆ 1.20 ಲಕ್ಷ ರೂ ನೀಡಲಾಗುತ್ತದೆ. ಆದರೆ ಅಲೆಮಾರಿ ಜನಾಂಗದವರಿಗೆ ವಿಶೇಷವಾಗಿ 1.50 ಲಕ್ಷ ರೂ ಅನುದಾನವನ್ನು ನೀಡಲಾಗುವುದು ಎಂದರು.

ಅಲೆಮಾರಿ ಜನಾಂಗದವರು ವ್ಯವಸಾಯ ಮಾಡಲು ಇಚ್ಛಿಸಿದರೆ ಬೇಸಾಯಕ್ಕೆ ಅವಶ್ಯವಿರುವ ಭೂಮಿ ಕೊಡುವಂತೆ, ಅದಕ್ಕೆ ಸೂಕ್ತವಾದ ಭೂಮಿ ಗುರುತಿಸುವ ಕೆಲಸಕ್ಕೆ ಮುಂದಾಗುವಂತೆಯೂ ಸಚಿವ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಎನ್.ಅಜಯ್ ನಾಗಭೂಷಣ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಾಲತಿ, ಜಿಪಂ ಮಾಜಿ ಅಧ್ಯP್ಷÀ ಲಿಂಗಯ್ಯ ಹಾಜರಿದ್ದರು.

Friday, 24 April 2015

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಮತ್ತೊಂದು ರಾಷ್ಟ್ರಮಟ್ಟದ ಪ್ರಶಸ್ತಿ ಪ್ರದಾನ

ನವದೆಹಲಿ.24 ಗ್ರಾಮೀಣಾಭಿವೃದ್ಧಿ ಮತ್ತುಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ  ವಿಶೇಷ ಸಾಧನೆಗೈದ ಕರ್ನಾಟಕ ರಾಜ್ಯದಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ     ರಾಷ್ಟ್ರ ಮಟ್ಟದ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು
ನವದೆಹಲಿಯ ವಿಜ್ಞಾನ ಭವನದಲ್ಲಿಂದು ನಡೆದ ಪಂಚಾಯತ್ ದಿನಾಚಣೆಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರಿಂದ ಗ್ರಾಮೀಣಾಭಿವೃದ್ಧಿ ಹಾಗು ಪಂಚಾಯತ್ ರಾಜ್ ಇಲಾಖೆಯ ಸಚಿವರಾದ ಶ್ರೀಹೆಚ್ಕೆ.ಪಾಟೀಲ್  ಅವರು ಪ್ರಶಸ್ತಿಯನ್ನು  ಸ್ವೀಕರಿಸಿದ ನಂತರಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.  ಕರ್ನಾಟಕ ರಾಜ್ಯದ ಗ್ರಾಮೀಣಾಭಿವೃದ್ಧಿಮತ್ತು  ಪಂಚಾಯತ್ ರಾಜ್ ಇಲಾಖೆಯು ಹಣಕಾಸು ನಿರ್ವಹಣೆ ವಿಭಾಗದಲ್ಲಿ ಪ್ರಥಮ ಸ್ಥಾನ,   ಪಾಲಿಸಿ ಡೆವಲೂಷನ್ ಸೂಚ್ಯಾಂಕ ವಿಭಾಗದಲ್ಲಿ   2 ನೇಸ್ಥಾನವನ್ನು ಪಡೆದಿದೆ.  ಎಲ್ಲಾ ಕ್ಷೇತ್ರಗಳ ಸರಾಸರಿ ವಿಭಾಗದಲ್ಲಿ  3 ನೇ ಸ್ಥಾನಪಡೆದಿದೆ.  ವಿಕೇಂದ್ರಿಕಣದ ಮೂಲಕ  ಯೋಜನೆಗಳ ಅನುಷ್ಠಾನ ವಿಭಾಗದಲ್ಲಿ 2ನೇ ಸ್ಥಾನ ಪಡೆದಿದೆ.  ಕೇರಳ ರಾಜ್ಯವು ಪ್ರಥಮ ಸ್ಥಾನದಲ್ಲಿದೆಪ್ರಧಾನ ಮಂತ್ರಿಗಳು ರಾಜ್ಯದ ಸಾಧನೆಗೆ  ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಎಲ್ಲಾ ಪಂಚಾಯತ್ ಸಂಸ್ಥೆಗಳು ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಹಿನ್ನೆಲೆಯಲ್ಲಿ ಪ್ರಶಸ್ತಿಯುಸಂದಿದೆ.  ಎಲ್ಲಾ ಪಂಚಾಯತ್ ಸಂಸ್ಥೆಗಳ ಅಧ್ಯಕ್ಷರುಪದಾಧಿಕಾರಿಗಳನ್ನು ಅಭಿನಂದಿಸಿದರು
ರಾಜ್ಯದ ಆರ್ಡಿಪಿಆರ್ ಇಲಾಖೆಯು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು,ಕುಡಿಯುವ ನೀರುನೈರ್ಮಲ್ಯರಸ್ತೆ ನಿರ್ಮಾಣ ,  ರುದ್ರಭೂಮಿ ನಿರ್ಮಾಣರೈತರ ಕಣ ನಿರ್ಮಾಣ ಸೇರಿದಂತೆ ಅನೇಕ ಯೋಜನೆಗಳನ್ನು ಯಶಸ್ವಿಯಾಗಿಅನುಷ್ಠಾನಗೊಳಿಸುತ್ತಿದೆವೈಯಕ್ತಿಕ  ಹಾಗು ಸಮುದಾಯದ ವಿಭಾಗದಡಿಯೋಜನೆಗಳನ್ನು ಸಮರ್ಪಕವಾಗಿ  ಅನುಷ್ಠಾನಗೊಳಿಸುತ್ತಿದೆಸಾಕ್ಷರತಾ ಪ್ರಮಾಣಹೆಚ್ಚಾಗಿರುವ    ಕೇರಳ ರಾಜ್ಯದೊಂದಿಗೆ ಆರೋಗ್ಯಕರ ಹಾಗು ಸ್ಪರ್ಧಾತ್ಮಕವಾಗಿಕಾರ್ಯನಿರ್ವಹಿಸಲಾಗುತ್ತದೆಜಿಲ್ಲಾ ಪಂಚಾಯತ್ , ತಾಲೂಕ ಪಂಚಾಯತ್ ,ಗ್ರಾಮ ಪಂಚಾಯತ್ ವಿಭಾಗದಲ್ಲೂ  ಅತ್ಯುತ್ತಮ ಪ್ರಶಸ್ತಿಯನ್ನು ಪಡೆದಿದೆ.ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ.ಲೋಪದೋಷಗಳನ್ನು ಸರಿಪಡಿಸಿ ಯಾವುದೇ ದುರುಪಯೋಗವಾಗದಂತೆಕ್ರಮಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.